ನಿನ್ನೆ ಬೈಕ್ ಕದ್ದ ಕಳ್ಳನಿಂದ ಇಂದು ಅರಂತೋಡಿನಲ್ಲಿ ಮತ್ತೆ ಕಳ್ಳತನಕ್ಕೆ ಯತ್ನ

0

ಸ್ಥಳೀಯರ ಗಮನಕ್ಕೆ ಬಂದ ಕಾರಣ ವಿಫಲಗೊಂಡ ಕಳ್ಳನ ಶ್ರಮ

.

ಸೆ. 22 ರಂದು ಬೈಕ್ ನಲ್ಲಿ ಹೋಗುತ್ತಿದ್ದ ಶಂಕಿತ ವ್ಯಕ್ತಿಯನ್ನು ಕನಕಮಜಲು ಪರಿಸರದಲ್ಲಿ ಸ್ಥಳೀಯರು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತ ಬೈಕ್ ಕಳ್ಳನೆಂದು ತಿಳಿದಿದ್ದು, ಬಳಿಕ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರಿಗೆ ಒಪ್ಪಿಸಿದ್ದರು.

ಆದರೆ ಇಂದು ಮತ್ತೆ ಅದೇ ವ್ಯಕ್ತಿ ಅರಂತೋಡಿನಲ್ಲಿ ಇದೇ ರೀತಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದು ಸ್ಥಳೀಯರು ಆತನನ್ನು ಹಿಡಿದು ಸಮೃದ್ಧಿ ಮಾರ್ಟ್ ಎದುರು ನಿಲ್ಲಿಸಿದ್ದಾರೆ.
ಬೈಕ್ ಕದ್ದು ಪರಾರಿಯಾಗಲು ಪ್ರಯತ್ನ ಮಾಡುತ್ತಿರುವಾಗ ಅಲ್ಲಿ ನಿಂತಿದ್ದ ಸ್ಥಳೀಯರಾದ ಶರತ್ ಹಾಗೂ ಇತರರು ಅವನನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ.

ಈತ ನೋಡಲು ಮಾನಸಿಕನಂತೆ ಕಂಡು ಬರುತ್ತಿದ್ದರೂ ನಿಜ ಏನೆಂಬುದು ಸಂಬಂಧಪಟ್ಟವರು ಸರಿಯಾಗಿ ವಿಚಾರಿಸಿ ತಿಳಿಯಬೇಕಾಗಿದೆ.

ಒಟ್ಟಿನಲ್ಲಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದಾಗ ಪೊಲೀಸರು ವಿಚಾರಣೆ ನಡೆಸಿ ಮಾನಸಿಕ ಅಸ್ವಸ್ಥನೆಂಬ ಭಾವನೆಯಿಂದ ಸುಲಭವಾಗಿ ಬಿಟ್ಟು ಬಿಡುತ್ತಾರೆ. ಈ ಕಾರಣದಿಂದ ಆತ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿರಬಹುದೇ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.