ಬ್ಯಾಂಕ್ ಆಫ್ ಬರೋಡಾದ ಹಿರಿಯ ಕಾನೂನು ಸಲಹೆಗಾರರಾಗಿ ವೆಂಕಟರಮಣ ಡಿ. ನೇಮಕ

0

ಸುಳ್ಯ:ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯ ಹಿರಿಯ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ವೆಂಕಟರಮಣ ಡಿ.ರವರು ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯ ಕಛೇರಿಯಿಂದ ನೇಮಕಗೊಂಡು ಆದೇಶವಾಗಿರುತ್ತದೆ.


ಪ್ರಸ್ತುತ ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ವೃತ್ತ,ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ,ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಮಂಗಳೂರು ವಲಯ ಕಾನೂನು ಸಲಹೆಗಾರರಾಗಿದ್ದಾರೆ.


ಸುಳ್ಯ ಗಾಂಧಿನಗರ ಸೇಟು ಸಂಕೀರ್ಣದಲ್ಲಿ ಕಛೇರಿ ಹೊಂದಿದ್ದಾರೆ.


ಇವರು ಉಬರಡ್ಕ ಮಿತ್ತೂರು ಗ್ರಾಮದ ಕೆದಂಬಾಡಿಯ ಡಿ.ಸೀತಾರಾಮ ಭಟ್ ಮತ್ತು ಡಿ.ಮಹಾಲಕ್ಷ್ಮಿ ದಂಪತಿಗಳ ಪುತ್ರನಾಗಿರುತ್ತಾರೆ ಇವರ ಸಹೋದರ ಕೃಷ್ಣಮೂರ್ತಿ ಡಿ. ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿರುತ್ತಾರೆ