ಭಾನುಲೇಖ ಸುರೇಶ್ ಪೂಂದ್ರುಕೋಡಿಯವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಗೌರವ ಪ್ರಶಸ್ತಿ

0

ಜನಸಿರಿ ಫೌಂಡೇಷನ್ (ರಿ) ವತಿಯಿಂದ ಸೆ.28ರಂದು ಬೆಂಗಳೂರಿನ ಪುರಭವನದ ಸರ್. ಪುಟ್ಟಣ್ಣ ಶೆಟ್ಟಿ ಸಭಾಭವನದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಶಿಕ್ಷಕರ ಹಬ್ಬ-2024 ಕಾರ್ಯಕ್ರಮದಲ್ಲಿ ಸುಳ್ಯ ಗಾಂಧಿನಗರದ ಪೂಂದ್ರುಕೋಡಿ ಭಾನುಲೇಖ ಸುರೇಶ್ ರವರಿಗೆ ಅತ್ಯುತ್ತಮ ಶಿಕ್ಷಕಿ-2024 ಗೌರವ ಪ್ರಶಸ್ತಿ ಲಭಿಸಿದೆ.

ಇವರು ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಶಾಲೆ ಐಸಿಎಸ್‌ಇ , ಇಗ್ಗಲೂರು, ಚಂದಾಪುರ ಇಲ್ಲಿ ಕಳೆದ 15 ವರ್ಷಗಳಿಂದ ರಾಸಾಯನ ಶಾಸ್ತ್ರ ಮತ್ತು ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಪತಿ ಸುರೇಶ್ ರವರು ಸಿವಿಲ್ ಇಂಜಿನಿಯರ್ ಆಗಿದ್ದು, ಸ್ವಂತ ಸಂಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.

ಪುತ್ರ ಅಭಿನವ್ ಮಂಗಳೂರಿನ ಶಾರದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದಾನೆ, ಮಗಳು ಲತಿಕಾ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಐಸಿಎಸ್‌ಇ ಶಾಲೆ, ಇಗ್ಗಲೂರು, ಚಂದಾಪುರ ಇಲ್ಲಿ 7ನೇ ತರಗತಿ ಕಲಿಯುತ್ತಿದ್ದಾಳೆ.

ಭಾನುಲೇಖರವರು ಕೋಲ್ಚಾರು ದಿ.ಚಿನ್ನಪ್ಪ ಗೌಡ ಮತ್ತು ಚಂದ್ರಕ್ಕಿ ದಂಪತಿ ಪುತ್ರಿ.

ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ.