ಪಂಜದಲ್ಲಿ ಜ್ಯೋತಿ ರಥಯಾತ್ರೆಗೆ ಸ್ವಾಗತ

0

ಕರ್ನಾಟಕ ಸಂಭ್ರಮ -50ರ ಅಂಗವಾಗಿ ರಾಜ್ಯಾದ್ಯಂತ ಜ್ಯೋತಿ ರಥಯಾತ್ರೆ ಸಂಚರಿಸುತ್ತಿದ್ದ ಸೆ.30 ರಂದು ಸುಳ್ಯ ತಾಲೂಕು ಪ್ರವೇಶಿಸಿದ್ದು ಪಂಜದಲ್ಲಿ ಸ್ವಾಗತಿಸಲಾಯಿತು.

ಪಂಜದಲ್ಲಿ ಸುಳ್ಯ ತಹಶೀಲ್ದಾರ್ ಅರವಿಂದ್ , ಉಪ ತಹಶೀಲ್ದಾರ್ ಚಂದ್ರಕಾಂತ್ ಯಂ ಆರ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ , ಇಂಜಿನಿಯರ್ ಜನಾರ್ಧನ್, ಜಿ.ಪಂ. ಎ.ಇ.ಇ. ಚೈತ್ರಾ ಎಸ್.ಆರ್., ಮೊದಲಾದವರು ಉಪಸ್ಥಿತರಿದ್ದರು.