ಕೊಡಗು ಸಂಪಾಜೆ ಪೊಲೀಸ್ ಉಪಠಾಣಾ ಎ.ಎಸ್.ಐ. ಸುಂದರ ಸುವರ್ಣ ಮಡಿಕೇರಿ ಗ್ರಾಮಾಂತರ ಠಾಣೆಗೆ ವರ್ಗಾವಣೆ

0

ಕೊಡಗು ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಂದರ ಸುವರ್ಣ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು, ಅವರಿಗೆ ಸಂಪಾಜೆ ಉಪಠಾಣೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಅ.1ರಂದು ಸಂಪಾಜೆಯ ಅರಣ್ಯ ಇಲಾಖೆಯ ವಸತಿಗೃಹದಲ್ಲಿ ನಡೆಯಿತು.

ಸುಂದರ ಸುವರ್ಣ ಅವರು ಕಳೆದೊಂದು ವರ್ಷದಿಂದ ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಎ.ಎಸ್. ಐ. ಆಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಮಡಿಕೇರಿ ಗ್ರಾಮಾಂತರ ಠಾಣಾ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸಂಪಾಜೆ ಅರಣ್ಯ ಇಲಾಖೆಯ ವನಪಾಲಕರಾದ ವಿಜಯೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪೊಲೀಸ್ ಅಧಿಕಾರಿ ಸತೀಶ್, ಕೊಡಗು ಸಂಪಾಜೆ ಗ್ರಾ.ಪಂ. ಸದಸ್ಯರುಗಳಾದ ಕುಮಾರ ಚೆದ್ಕಾರ್, ಸುರೇಶ್ ಪಿ.ಎಲ್., ಗ್ರಾ.ಪಂ. ಮಾಜಿ ಚಯರ್ ಮ್ಯಾನ್ ಡಿ.ಎಸ್. ಬಾಲಕೃಷ್ಣ, ಪಯಸ್ವಿನಿ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ, ಸ್ಥಳೀಯರಾದ ಸಂಜೀವ ಪೂಜಾರಿ, ತಿರುಮಲ ಸೋನ, ಗೋಪಾಲ ಸಂಪಾಜೆ, ಮೋಹನ ಬಾಳೆಕಜೆ, ಹಸೈನಾರ್, ಪುರುಷೋತ್ತಮ ಕುಂಬಾಡಿ, ಕೊರಗಪ್ಪ ಅರಮನೆತೋಟ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂದೀಪ್ ಫಾರೆಸ್ಟ್ ಅವರು ವಂದಿಸಿದರು.