ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಲ್ಪನಾ ಪಿ. ಡಿ. ಪೆರಂಗಾಜೆ ರಾಜ್ಯಮಟ್ಟಕ್ಕೆ

0

ವಿರಾಜಪೇಟೆ ತಾಲೂಕು ಹುದಿಕೇರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಳಕೇರಿ ಪರಾಜೆ ಇಲ್ಲಿಯ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕಲ್ಪನಾ ಪಿ ಡಿ ಪೆರಂಗಾಜೆ ಗುಂಡು ಎಸೆತ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ತಟ್ಟೆ ಎಸೆತ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾಳೆ.
ಎರಡು ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾಳೆ. ಇವರು ಪೆರಾಜೆ ಗ್ರಾಮದ ಪೆರಂಗಾಜೆ ಶ್ರೀ ದೇವಿಪ್ರಸಾದ್ ಮತ್ತು ಕವೀನಾ ಇವರ ಪುತ್ರಿಯಾಗಿರುತ್ತಾರೆ