ಬೆಟ್ಟಂಪಾಡಿ : ತಾಲೂಕು ಮಟ್ಟದ ಮಕ್ಕಳ ಭಜನಾ ತರಬೇತಿ ಶಿಬಿರ

0

ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಹಾಗೂ ಸುಳ್ಯ ತಾಲೂಕು ಭಜನಾ ಪರಿಷತ್ ಇದರ ಸಹಯೋಗದೊಂದಿಗೆ ಸುಳ್ಯ ತಾಲೂಕು ಮಟ್ಟದ ಭಜನಾ ಶಿಬಿರ ಸಮಿತಿ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಮಕ್ಕಳ ಭಜನಾ ತರಬೇತಿ ಶಿಬಿರವು ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಸಭಾಂಗಣದಲ್ಲಿ ಅಕ್ಟೋಬರ್ 7ರಂದು ಪ್ರಾರಂಭಗೊಂಡಿತು.

ಸುಳ್ಯ ಶ್ರೀ ಕೇಶವ ಕೃಪದ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಇವರು ದೀಪ ಬೆಳಗಿಸುವುದರೊಂದಿಗೆ ಶಿಬಿರವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧ. ಗ್ರಾ.ಯೋಜನೆಯ ಮೇಲ್ವಿಚಾರಕರಾದ ತೀರ್ಥರಾಮರು ಶಿಬಿರಕ್ಕೆ ಶುಭ ಹಾರೈಸಿದರು. ಗಣಪತಿ ಕಲಾ ಕೇಂದ್ರದ ವಿನೋದ್ ದಾಮೋದರ್ ಅರಂಬೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಜನಾ ಶಿಬಿರ ಸಮಿತಿಯ ಸಂಚಾಲಕ ಅವಿನ್ ಬೆಟ್ಟಂಪಾಡಿ ಸ್ವಾಗತಿಸಿ, ನಾರಾಯಣ ಬೆಟ್ಟಂಪಾಡಿ ಧನ್ಯವಾದ ಸಮರ್ಪಿಸಿದರು. ಉದಯ್ ಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

ಒಂದು ವಾರಗಳ ಕಾಲ ನಡೆಯುವ ಈ ಭಜನಾ ಶಿಬಿರವು ಕುಳಿತು ಮತ್ತು ಕುಣಿತ ಎರಡು ಪ್ರಕಾರಗಳಲ್ಲಿ ನಡೆಯುತ್ತಿದ್ದು, ಶಿಬಿರವು ಸಂಪೂರ್ಣ ಉಚಿತ ಶಿಬಿರವಾಗಿರುತ್ತದೆ.