ಹಾಲೆಮಜಲು ಪುಸ್ತಕ ಗೂಡಿಗೆ ಅರೆಭಾಷೆ ಅಕಾಡೆಮಿಯಿಂದ ಪುಸ್ತಕ ಕೊಡುಗೆ

0

ಗುತ್ತಿಗಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕುರು ಗ್ರಾಮದ ಹಾಲೆಮಜಲಿನಲ್ಲಿರುವ ಬಸ್ಸು ತಂಗುದಾಣದ ಪುಸ್ತಕ ಗೂಡಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕೊಡ ಮಾಡುವ ವಿವಿಧ ಸಾಹಿತಿಗಳು ಬರಹಗಾರರು ಬರೆದಿರುವ ಅರೆಬಾಷೆಯ ಕವನ ಸಂಕಲನ, ಅರೆ ಭಾಷೆ ಲಿಪಿ ವ್ಯಾಕರಣ ಸೇರಿದಂತೆ ಇನ್ನಿತರ ಸಾಹಿತ್ಯ ಕಥೆಗಳಿರುವ ಪುಸ್ತಕಗಳನ್ನು ಮಡಿಕೇರಿ ದಸರಾ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿಯವರು ಪುಸ್ತಕ ಗೂಡಿನ ನಿರ್ವಾಹಕ ಅರೆಭಾಷೆ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ದಿನೇಶ್ ಹಾಲೆಮಜಲುರವರಿಗೆ ನೀಡಿದರು.

ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರುಗಳಾದ ಜ್ಞಾನೇಶ್ ನಿಡ್ಯಮಲೆ, ವಿನೋದ್ ಮೂಡಗದ್ದೆ ಮಾಜಿ ಸದಸ್ಯ ಹಾಗೂ ಸಾಹಿತಿ ಎ.ಕೆ.ಹಿಮಕರ, ರಿಜಿಸ್ಟರ್ ಚಿನ್ನಸ್ವಾಮಿ, ಸಿಬ್ಬಂದಿಗಳಾದ ಜ್ಯೋತಿ, ಶೋಭಾ
ಉಪಸ್ಥಿತರಿದ್ದರು.