ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ತಲಕಾವೇರಿಯಿಂದ ತೀರ್ಥ

0

ಶ್ರೀ ಶಾಸ್ತಾವು ದೇವರಿಗೆ ಕಾವೇರಿ ತೀರ್ಥಾಭಿಷೇಕ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಕೊಡಗಿನ ತಲಕಾವೇರಿಯಿಂದ ಅ.18ರಂದು ಬೆಳಿಗ್ಗೆ ತೀರ್ಥ ತಂದು ಶ್ರೀ ಶಾಸ್ತಾವು ದೇವರಿಗೆ ಕಾವೇರಿ ತೀರ್ಥಾಭಿಷೇಕ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಭಾಗಮಂಡಲದ ತಕ್ಕರಾದ ಕೋಡಿ ಮೋಟಯ್ಯ, ದೇವಸ್ಥಾನದ ಸಹಾಯಕ ಅರ್ಚಕ ಬಾಲಚಂದ್ರ ಹೆಗಡೆ, ದೇವಸ್ಥಾನದ ಸಿಬ್ಬಂದಿ ಕುಶಾಲಪ್ಪ, ಸಮಿತಿಯ ಲೋಲಜಾಕ್ಷ ನಿಡ್ಯಮಲೆ ಉಪಸ್ಥಿತರಿದ್ದರು.

ತಲಕಾವೇರಿಯಲ್ಲಿ ಪ್ರತೀ ವರ್ಷ ತುಲಾ ಸಂಕ್ರಮಣದಂದು ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಉದ್ಭವವಾಗುತ್ತಿದ್ದು, ತುಲಾ ಸಂಕ್ರಮಣದ ಮರುದಿನ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಅಲ್ಲಿಂದ ತೀರ್ಥ ತಂದು ದೇವರಿಗೆ ಅಭಿಷೇಕ ಮಾಡುವುದು ತಲೆತಲಾಂತರದ ವಾಡಿಕೆಯಾಗಿದೆ.