ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸುಳ್ಯ ತಾಲೂಕಿನ ಕಾನೂನು ಸಲಹೆಗಾರರಾಗಿ ಬಿ.ಶಂಕರಕುಮಾರ್ರವರು ಆಯ್ಕೆಯಾಗಿದ್ದಾರೆ. ಮಾ. ೧೦ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇವರನ್ನು ಅನುಮೋದಿಸಲಾಯಿತು.
ಇವರು ಕರಿಕ್ಕಳ ಮುಚ್ಚಿಲದ ದಿ. ಬಿ. ಎಸ್. ಸುಬ್ರಹ್ಮಣ್ಯ ಭಟ್ರವರ ಪುತ್ರ.ಇವರು ಈಗಾಗಲೇ ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹಾಗೂ ಪಂಜ, ಪಂಬೆತ್ತಾಡಿ, ಕಲ್ಮಡ್ಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಕಾನೂನು ಸಲಹೆಗಾರರು ಆಗಿರುತ್ತಾರೆ. ಅವರಿಗೆ ಪಂಜದಲ್ಲಿ ಕಚೇರಿ ಇದೆ.