ರಸ್ತೆಯಲ್ಲಿ ನೆರೆ ನೀರು

0

 

ಕೊಲ್ಲಮೊಗ್ರಕ್ಕೆ ಹೋಗಲಾರದೆ ಹರಿಹರದಲ್ಲಿ ಬಾಕಿಯಾದ ಹಲವಾರು‌ ಜನ

ಹರಿಹರ ದೇಗುಲದಲ್ಲಿ ಊಟದ ವ್ಯವಸ್ಥೆ

ಕೊಲ್ಲಮೊಗರು, ಕಲ್ಮಕಾರು ಭಾಗದಲ್ಲಿ ಮೇಘ ಸ್ಪೋಟದಿಂದ ಸುರಿದ ರಣ ಭೀಕರ ಮಳೆಗೆ ಹರಿಹರ ಪೇಟೆ ಬಳಿ ನೆರೆ ನೀರು ರಸ್ತೆಗೆ ಬಂದು ಕೊಲ್ಲಮೊಗರು ರಸ್ತೆ ಬಂದ್ ಆಗಿದೆ.

ಈ ಹಿನ್ನೆಲೆಯಲ್ಲಿ ಕೊಲ್ಲಮೊಗರಿಗೆ ಹೋಗಲಾರದೆ ಐವತ್ತಕ್ಕೂ ಹೆಚ್ಚುಮಂದಿ ಹರಿಹರದಲ್ಲಿ ಬಾಕಿ ಆಗಿದ್ದು ಅವರಿಗೆ ಹರಿಹರ ದೇಗುಲದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.