ನೀರಿನ ರಭಸಕ್ಕೆ ಅಂಗಡಿ, ಮನೆಗಳು ಸಂಪೂರ್ಣ ಜಲಾವೃತ
ಮಧ್ಯರಾತ್ರಿಯಿಂದ ಬೆಳಗ್ಗಿನ ತನಕ ಮನೆಯ ಟೇರೆಸ್ ನಲ್ಲೇ ನಿಂತ ಜನರು
ಕಲ್ಲುಗುಂಡಿಯ ಕೂಲಿಶೆಡ್ ಬಳಿ ಪಯಸ್ವಿನಿ ನದಿಯು ಉಕ್ಕಿ ಹರಿದಿದ್ದು,ನೀರಿನ ರಭಸಕ್ಕೆ ಅಂಗಡಿ, ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಮಧ್ಯರಾತ್ರಿಯಿಂದ ಬೆಳಗ್ಗಿನ ತನಕಜನರು ಮನೆಯ ಟೇರೆಸ್ ನಲ್ಲೇ ನಿಂತಿದ್ದರು.
ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳುಯಾರೂ ಸ್ಥಳಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಕಲ್ಲುಗುಂಡಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಊರವರು ಆಗ್ರಹಿಸುತ್ತಿದ್ದಾರೆ.