ಅರಂತೋಡು ಅಂಗಡಿಮಜಲು ಬಳಿಯ ಹಂಸ ಕುಕ್ಕುಂಬಳರವರ ಮನೆಗೆ ಹೋಗುವ ರಸ್ತೆಯು ಇತ್ತೀಚಿನ ದಿನಗಳಲ್ಲಿ ಸುರಿದ ಭಾರಿ ಮಳೆಗೆ ರಸ್ತೆಯು ಕೊಚ್ಚಿ ಹೋಗಿದ್ದು, ಅಲ್ಲಿರುವ ಮನೆಯವರಿಗೆ ಅಂತಕ ಸೃಷ್ಟಿಸಿದೆ.
ಹೊಳೆಯ ಬದಿಯಲ್ಲಿರುವ ರಸ್ತೆಯಾಗಿದ್ದು ತಡೆಗೋಡೆ ಇಲ್ಲದಿರುವುದು ರಸ್ತೆ ಹಾನಿಯಾಗಲು ಕಾರಣ. ಸಂಬಂಧಪಟ್ಟ ಜನ ಪ್ರತಿನಿಧಿಗಳು ಗಮನಹರಿಸಿ ನದಿಯ ಬದಿಗೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಹಂಸ ಕುಕ್ಕುಂಬಳರವರು ಅಗ್ರಹಿಸಿದ್ದಾರೆ.