ಮಡಪ್ಪಾಡಿ ಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ ಕ್ಕೆ ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದಲ್ಲಿ ಚಾಲನೆ ನೀಡಲಾಯಿತು.
ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಯ್ಯ ಪೂಂಬಾಡಿ ದೀಪ ಬೆಳಗಿಸಿ ಚಾಲನೆ ನೀಡಿದರು. ನಿರ್ದೇಶಕ ಸೋಮಶೇಖರ ಕೇವಳ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಮಿತ್ರದೇ ಮಡಪ್ಪಾಡಿ, ಮಹಾತ್ಮಗಾಂಧಿ ಗ್ರಾಮ ಸೇವಾ ತಂಡದ ಸಂಚಾಲಕ ವಿಜಯಕುಮಾರ್ ಎಂ.ಡಿ., ಪ್ರಮುಖರಾದ ಶಕುಂತಲಾ ಕೇವಳ, ಜಯರಾಮ ಹಾಡಿಕಲ್ಲಯ, ಸೊಸೈಟಿ ನಿರ್ದೇಶಕರು, ಶಾಲಾ ವಿದ್ಯಾರ್ಥಿಗಳು ಊರವರು ಉಪಸ್ಥಿತರಿದ್ದರು. ಸ್ವಾತಂತ್ರ್ಯ ದ ನಡಿಗೆ ಮಾಡಲಾಯಿತು.