ಸುಳ್ಯದ ಗೋಕುಲಂ ಮಕ್ಕಳ ಸಿದ್ಧ ಉಡುಪುಗಳ ಮಳಿಗೆ ವತಿಯಿಂದ ರಂಗಮಯೂರಿಯಲ್ಲಿ ಪುಟಾಣಿ ಶ್ರೀ ಕೃಷ್ಣ ಮತ್ತು ರಾಧೆಯರ ಕಲರವ

0

 

ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಕ್ಷಕರ ಮನಸೂರೆಗೊಂಡ ಬಾಲಗೋಪಾಲರು

ಸುಳ್ಯದ ಗೋಕುಲಂ ಮಕ್ಕಳ ಸಿದ್ದ ಉಡುಪುಗಳ ಮಳಿಗೆ ಹಾಗೂ ರಂಗಮಯೂರಿ ಕಲಾ ಶಾಲೆಯ ಸಹಯೋಗದಲ್ಲಿ ನಂದಗೋಕುಲ ಶ್ರೀ ಕೃಷ್ಣ ರಾಧೆಯರ ಸ್ಪರ್ಧೆಯು ಆ.15 ರಂದು ನಡೆಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಚಿಣ್ಣರ ಕೃಷ್ಣ ವೇಷ ಸ್ಪರ್ಧೆಯು ಮನಸೂರೆಗೊಂಡಿತು. ಸಮಾರಂಭದಲ್ಲಿ ಹಲವಾರು ಗಣ್ಯರು ‌ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸುಮಾರು 100 ಕ್ಕೂ ಮಿಕ್ಕಿ ಚಿಣ್ಣರು ಹಾಗೂ ರಾಧೆಯ ವೇಷ ಧರಿಸಿದ ಪೋಷಕರು ಭಾಗವಹಿಸಿರುತ್ತಾರೆ.