ಸುಳ್ಯ :  ಶುಭಶ್ರೀ ಮಹಿಳಾ ಮಂಡಲ ಗಾಂಧಿನಗರ ವತಿಯಿಂದ ರಕ್ಷಾ ಬಂಧನ, ಆಟಿ ಆಚರಣೆ

0

ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ನಡೆದ ರಕ್ಷಾ ಬಂಧನ ಮತ್ತು ಆಟಿ ಆಚರಣೆ ನಡೆಯಿತು.

ಕಾಯ೯ಕ್ರಮದಲ್ಲಿ ಆಟಿ ಆಚರಣೆಯ ಮಹತ್ವದ ಬಗ್ಗೆ ಲೇಖಕಿ, ಪತ್ರಕತೆ೯ ಚಂದ್ರಾವತಿ ಯವರು ಮಾಹಿತಿ ನೀಡಿದರು.
ತದನಂತರ ನಡೆದ ರಕ್ಷಾ ಬಂಧನ ಕಾಯ೯ಕ್ರಮದಲ್ಲ್ಲಿ ಪತ್ರಕತ೯ ಜೆ.ಕೆ.ರೈಯವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
75ನೇ
ಸ್ವಾತಂತ್ರ್ಯ ಅಮ್ರತ ಮಹೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.ಸದಸ್ಯೆಯರೆಲ್ಲರು ತಂದ ಆಟಿ ತಿನಿಸುಗಳನ್ನು ಎಲ್ಲರಿಗೂ ವಿತರಿಸಲಾಯಿತು.
ಶಶಿಕಲಾ ಹರಪ್ರಸಾದ್ ರವರು ಕಾಯ೯ಕ್ರಮದ ಅಧ್ಯಕ್ಪತೆಯನ್ನು ವಹಿಸಿದ್ದರು. ಅಂಗನವಾಡಿ ಕಾರ್ಯಕತೆ೯ ಶೋಭಾರವರು ಸ್ವಾಗತಿಸಿ, ಖಜಾಂಜಿ ಗಿರಿಜಾ ಎಂ. ವಿ. ವಂದಿಸಿದರು.