ಅಚ್ರಪ್ಪಾಡಿ  ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

0

 

 

ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆ. 21ರಂದು ಅಚ್ರಪ್ಪಾಡಿ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಹಿತರಕ್ಷಣಾ ಸಮಿತಿಯ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜನಾರ್ಧನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಪಡ್ಪು ದೀಪ ಬೆಳಗಿಸಿ ಉದ್ಘಾಟಿಸಿ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶ್ರೀಮತಿ ಪ್ರಿಯಾಂಕ ನವದೆಹಲಿ ಇವರ ಸಹಕಾರದಿಂದ ಬಹುಮಾನ ವಿತರಣೆ ಮಾಡಲಾಯಿತು. ಗೌರವ ಉಪಸ್ಥಿತರಾಗಿ ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ದುರ್ಗಾದಾಸ್, ರಾಷ್ಟ್ರ ಪುರಸ್ಕೃತ ನಿವೃತ್ತ ಯೋಧ ಚಂದ್ರಶೇಖರ್ ಅಚ್ರಪ್ಪಾಡಿ ಭಾಗವಹಿಸಿದ್ದರು. ರ್ನಿರ್ಣಾಯಕರಾಗಿ ಪ್ರವೀಣ್ ದೇವ, ಶಾಲಾ ಶಿಕ್ಷಕರು, ಪೋಷಕರು ಊರವರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.
ಶ್ರೀಮತಿ ಶೋಭಾ ಕುಸುಮದರ ಅಡ್ಡನಪಾರೆ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ ಅಚ್ರಪ್ಪಾಡಿ ಸ್ವಾಗತಿಸಿ ಶಾಲಾ ಮುಖ್ಯ ಗುರುಗಳು ವಂದಿಸಿದರು.
ಎಂ.ಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ರಾಹುಲ್ ಮತ್ತು ಸೃಜನ್ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಊಟದ ಪ್ರಾಯೋಜಕರಾಗಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಆಡಳಿ ಮಂಡಳಿಯವರು ಸಹಕಾರ ನೀಡಿದರು. ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕು. ಪೃಥ್ವಿ ಇವರ ತಿಂಗಳ ಸಂಭಾವನೆಗೆ ರೂ. 5000ವನ್ನು ಶಿವಪ್ರಕಾಶ್ ಕಡಪಳ ನೀಡಿ ಸಹಕರಿಸಿದರು.