ಪೊದೆಗಳಿಂದ ಆವರಿಸಿಲ್ಪಟ್ಟ ಅಯ್ಯನಕಟ್ಟೆ ಪ್ರಯಾಣಿಕರ ತಂಗುದಾಣ

0

 

ಮೇಲ್ಚಾವಣಿ ಮೇಲೆ ಕಾಡು ಬಳ್ಳಿಗಳು ಬೆಳೆದು ಶಿಥಿಲಾವಸ್ಥೆಯಲ್ಲಿರುವ ತಂಗುದಾಣ

ಕಳಂಜ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಅಯ್ಯನಕಟ್ಟೆ ತಿರುವು ಬಳಿ ಇರುವ ಪ್ರಯಾಣಿಕರ ತಂಗುದಾಣ ಶಿಥಿಲಾವಸ್ಥೆ ಸ್ಥಿತಿಯಲ್ಲಿದ್ದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.
ಈ ತಂಗುದಾಣದಲ್ಲಿ ದಿನಂಪ್ರತಿ ನೂರಾರು ಸಾರ್ವಜನಿಕರು, ವಿದ್ಯಾರ್ಥಿಗಳು ವಾಹನಗಳಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬರುತ್ತದೆ.
ಆದರೆ ತಂಗುದಾಣದ ಮೇಲ್ಚಾವಣಿಯಲ್ಲಿ ಭಾರಿ ಗಾತ್ರದ ಕಾಡು ಬಳ್ಳಿಗಳು, ಪೊದೆಗಳು ತುಂಬಿಕೊಂಡಿದ್ದು ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ಸ್ಥಿತಿಯಲ್ಲಿ ಇದೆ.
ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಉಂಟಾಗುವುದಕ್ಕಿಂತ ಮೊದಲು ಸಂಬಂಧ ಪಟ್ಟವರು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.