ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ವತಿಯಿಂದ ಶ್ರೀ ಗೌರಿ ಗಣೇಶೋತ್ಸವ

0

ಆ.30 ರಿಂದ 31ರ ತನಕ ಶ್ರೀ ದೇವತಾರಾಧನ ಸಮಿತಿ ವತಿಯಿಂದ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 27ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವು ನಡೆಯಲಿದ್ದು ಆ.೩೦ ರಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ, 10 ಗಂಟೆಗೆ ಗೌರಿ ಮೂರ್ತಿಯ ಪ್ರತಿಷ್ಠಾಪನೆ ಬಳಿಕ ವಿವಿಧ ವೈಧಿಕ ಕಾರ್ಯಕ್ರಮ, ಸಂಜೆ 6.30ಕ್ಕೆ ಭಜನಾ ಕಾರ್ಯಕ್ರಮ, ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ. ಆ.31ರಂದು 10 ಗಂಟೆಗೆ ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ,  ಅಪರಾಹ್ನ 2 ಗಂಟೆಯಿಂದ ಶ್ರೀ ಗೌರಿ ಗಣೇಶ ಮೂರ್ತಿಗಳ ಶೋಭಾಯಾತ್ರೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟು ಆಸ್ಪತ್ರೆ ರಸ್ತೆಯಾಗಿ ಮುಖ್ಯ ರಸ್ತೆಗೆ ಸೇರಿ ಅಲ್ಲಿಂದ ಚಡಾವುವರೆಗೆ ಹೋಗಿ ಮರಳಿ ಸಂಪಾಜೆಯಿಂದ ಗಡಿಕಲ್ಲಿನವರೆಗೆ ಸಾಗಿ ದೇವಿಪ್ರಸಾದ್ ಅವರ ಮನೆಗೆ ಹೋಗುವ ಸೇತುವೆಯ ಬಳಿ ಇರುವ ಸಂಗಮದಲ್ಲಿ ಜಲಸ್ತಂಬನ ಮಾಡಲಾಗುವುದು.