ಶ್ರೀ ಗಣೇಶೋತ್ಸವ ಹಬ್ಬದ ಹಿನ್ನಲೆ

0

ಬೆಳ್ಳಾರೆ ಪೊಲೀಸರಿಂದ ಮುಖ್ಯರಸ್ತೆಯಲ್ಲಿ ಪಥಸಂಚಲನ

ಬೆಳ್ಳಾರೆ ಪೊಲೀಸರಿಂದ ಬೆಳ್ಳಾರೆ ಮುಖ್ಯರಸ್ತೆಯಲ್ಲಿ ಪಥಸಂಚಲನ ಆ.29 ರಂದು ನಡೆಯಿತು.

ಶ್ರೀ ಗಣೇಶೋತ್ಸವ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು
ಮುಂಚಿತವಾಗಿ ಪೊಲೀಸರಿಂದ ಪಥಸಂಚಲನ ನಡೆಯಿತು.
ಡಿವೈಎಸ್ಪಿ ವೀರಯ್ಯ ಹಿರೇಮಠ್, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನಚಂದ್ರ ಜೋಗಿ, ಬೆಳ್ಳಾರೆ ಎಸ್.ಐ.ಸುಹಾಸ್ ನೇತೃತ್ವದಲ್ಲಿ ಪೊಲೀಸರು ಬೆಳ್ಳಾರೆ ಪೊಲೀಸು ಠಾಣೆಯಿಂದ ಮಾಸ್ತಿಕಟ್ಟೆಯವರೆಗೆ ಅಲ್ಲಿಂದ ಕೆಳಗಿನ ಪೇಟೆ ದೇವಸ್ಥಾನದವರೆಗೆ ಪಥಸಂಚಲನ ನಡೆಸಿದರು.
ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.