ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೆ. ನಾರಾಯಣ ಗೌಡ ಕುಜುಂಬಾರು ನಿವೃತ್ತಿ

0

 

ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆ ನಾರಾಯಣ ಗೌಡ ಕುಜುಂಬಾರು ಇವರು ಆ.೩೧ ರಂದು ನಿವೃತ್ತಿಹೊಂದಲಿದ್ದಾರೆ.
ಪಿ.ಯು ಓದಿ, ಜಿ ಡಿ ಸಿ ಶಿಕ್ಷಣ ಪಡೆದಿದ್ದರು. ಐನೆಕಿದು ಗ್ರಾಮದ ಕುಜುಂಬಾರು ಮನೆತನದವರು. ದಿ.ಅಪ್ಪಯ್ಯ ಗೌಡ ಮತ್ತು ಶ್ರೀಮತಿ ದೇವಮ್ಮ ದಂಪತಿಗಳ ಪುತ್ರ.
೧೯೯೫ ರ ಪೆಬ್ರವರಿಯಲ್ಲಿ ಕರ್ತವ್ಯಕ್ಕೆ ಸೇರಿದ ಇವರು ಒಂದು ವರ್ಷಗಳ ಕಾಲ ಖಾಸಗಿ ನೆಲೆಯಲ್ಲಿ ಕೆಲಸ ಮಾಡಿದ್ದು, ೧೯೯೬ ರಲ್ಲಿ ಗುಮಾಸ್ತರಾಗಿ ಖಾಯಂಗೊಂಡಿದ್ದರು. ಬಳಿಕ ಹಿರಿಯ ಗುಮಾಸ್ತರಾಗಿದ್ದರು. ಕಳೆದ ೬ ವರ್ಷಗಳ ಹಿಂದೆ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದರು. ನಾರಾಯಣ ಗೌಡರ ಪತ್ನಿ ಶ್ರೀಮತಿ ಚಿತ್ರಕಲಾ, ಪುತ್ರ ಮನೀಶ್ ಕುಜುಂಬಾರು, ಪುತ್ರಿ ಮನಸ್ವಿ ಕುಜುಂಬಾರು.