ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 109ನೇ ಮಹಾಸಭೆ

0

455.59 ಕೋಟಿ ರೂ ವ್ಯವಹಾರ

1.27 ಕೋಟಿ ರೂ.ನಿವ್ವಳ ಲಾಭ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 109ನೇ ವಾರ್ಷಿಕ ಮಹಾ ಸಭೆಯು ಸೆ.17 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು 2021-22 ಸಾಲಿನಲ್ಲಿ 5098 ಸದಸ್ಯರನ್ನು ಹೊಂದಿದೆ. 7. 56 ಕೋಟಿ ರೂ. ಪಾಲು ಬಂಡವಾಳ ಸಂಗ್ರಹಿಸಿ, 46.42 ಕೋಟಿ ರೂ. ಠೇವಣಿ ಹೊಂದಿರುತ್ತದೆ. ರೂ 34.61 ಕೋಟಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು ರೂ.73.15 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ವಿತರಿಸಿದ ಸಾಲಗಳ ಪೈಕಿ 97.09 ವಸೂಲಾಗಿರುತ್ತದೆ.ರೂ. 455. 59 ಕೋಟಿ ಒಟ್ಟು ವಾರ್ಷಿಕ ವ್ಯವಹಾರ ವನ್ನು ಮಾಡಲಾಗಿದೆ.

ವರದಿ ಸಾಲಿನಲ್ಲಿ ಒಟ್ಟು ರೂ.1,27,50,500 ನಿವ್ವಳ ಲಾಭವನ್ನು ಗಳಿಸಿ , ಸದಸ್ಯರಿಗೆ 8 ಶೇ. ಡಿವಿಡೆಂಟ್ ವಿತರಿಸಲು ಶಿಫಾರಸ್ಸು ಮಾಡಿದೆ. ವಾರದ ಎಲ್ಲಾ ದಿನಗಳಲ್ಲಿ ಕೇಂದ್ರ ಕಚೇರಿಯಲ್ಲಿ ಕ್ಯಾಂಪ್ಕೋ ಸಹಯೋಗದೊಂದಿಗೆ ಅಡಿಕೆ ಖರೀದಿ ಮಾಡುತ್ತಿದ್ದೇವೆ. ಸದಸ್ಯರು ಅಡಿಕೆಯನ್ನು ಸಂಘದ ಮೂಲಕ ಮಾರಾಟ ಮಾಡಬೇಕು. ಈ ಮೂಲಕ ಸಂಸ್ಥೆಗಳನ್ನು ಗಟ್ಟಿಗೊಳಿಸಬೇಕು.ನಮ್ಮ ಕೃಷಿಕ ರೈತರ ಸದಸ್ಯರು ಬೆಳೆಸಿದ ಬೆಳೆಗೆ ಯೋಗ್ಯವಾದ ಮಾರುಕಟ್ಟೆ ಧಾರಣೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ದಾಸ್ತಾನು ಇಡುವರೇ ಕೇನ್ಯ ಗ್ರಾಮದ ಹಾಗೂ ಬಳ್ಪ ಗ್ರಾಮದ ಮಧ್ಯಭಾಗದ ಸ್ಥಳವಾಗಿರುವ ಬೀದಿಗುಡ್ಡೆಯಲ್ಲಿ ಈ ಹಿಂದೆ ಖರೀದಿಸಿದ ನಿವೇಶನದಲ್ಲಿ ನಬಾರ್ಡ್ ಮಲ್ಟಿ ಸರ್ವಿಸ್ ಸೆಂಟರ್ ಯೋಜನೆಯಡಿ ಸುಮಾರು ರೂ.50 ಲಕ್ಷಗಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು ಬೀದಿಗುಡ್ಡೆ ಭಾಗದ ಜನರಿಗೆ ಪಡಿತರ ವಿತರಣೆ, ಗೊಬ್ಬರ ಮಾರಾಟ ,ಕೃಷಿ ಸಲಕರಣೆಗಳಾದ ಪಿವಿಸಿ ಪೈಪು ಹಾಗೂ ಬಿಡಿ ಭಾಗಗಳನ್ನು ಹಾಗೂ ಇನ್ನಿತರ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ.ಎಂದು ಸಂಘದ ಪ್ರಗತಿ ಕುರಿತು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ರವರು ವಿವರಿಸಿದರು.


ಪಿಯುಸಿ-ಎಸ್ ಎಸ್ ಎಲ್ ಸಿ ಸಾಧಕರಿಗೆ ಪ್ರೋತ್ಸಾಹ ಧನ: ಸಂಘದ ವಿದ್ಯಾನಿಧಿ ಯೋಜನೆಯಲ್ಲಿ ಪಂಜ ಸರಕಾರಿ ಪ್ರೌಢಶಾಲೆ, ಪಂಜ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ತಲಾ ಇಬ್ಬರನ್ನು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.ಪಂಜ
ಕುಳ್ಳಕ್ಕೋಡಿ ಜಯಂತ ಗೌಡರವರ ಪುತ್ರ ಮೊರಾರ್ಜಿ ದೇಸಾಯಿ ಪ್ರೌಢ ಶಾಲಾ ವಿದ್ಯಾರ್ಥಿ ಅಶ್ವಿತ್ ಕೆ.ಜೆ, ನಾಯರ್ ಕೆರೆ ಆನಂದ ಎನ್ ರವರ ಪುತ್ರಿ ಮೊರಾರ್ಜಿ ದೇಸಾಯಿ ಪ್ರೌಢಶಾಲಾ ವಿದ್ಯಾರ್ಥಿನಿ ಪ್ರತಿಕ್ಷಾ. ಎನ್, ಬಳ್ಪ ಭೋಗಾಯನ ಕೆರೆ ಪ್ರಸನ್ನ ಬಿ ರವರ ಪುತ್ರಿ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ವಿನೀತ ಪಿ, ಕೇನ್ಯ ಬಡ್ಡಕೋಟಿ ವಸಂತ ಗೌಡರ ಪುತ್ರಿ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಇಂಚರ ,ಪಂಜ
ಕೆಮ್ಮೂರು ನೂರುದ್ದೀನ್ ರವರ ಪುತ್ರಿ ಪಂಜ ಸರಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿನಿ ಆಯಿಷತ್ ಸುನೈನಾ, ಕೇನ್ಯ ಬಡ್ಡಕೋಟಿ ಸೋಮಶೇಖರ ಗೌಡರ ಪುತ್ರಿ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿನಿ ವತ್ಸಲ.ಬಿ,ಪಂಜ ಕುಳ್ಳಕ್ಕೋಡಿ ಜಯಂತ ಗೌಡರ ಪುತ್ರ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿ ಶರತ್ ಕೆ.ಜೆ., ಪಂಜ ಕಂಡೂರು ನಾರಾಯಣ ಗೌಡ ಪುತ್ರಿ ಮೇಘಾ ರವರು ಪ್ರೋತ್ಸಾಹ ಧನ ,ಗೌರವ ಸ್ವೀಕರಿಸಿದರು.


ಅಧಿಕ ವ್ಯವಹಾರ ಮಾಡಿದ ಸದಸ್ಯರಿಗೆ ಗೌರವಾರ್ಪಣೆ:

2021- 22ನೇ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಮಾಡಿರುವ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಸಂಘದ ಮೂಲಕ ಅತ್ಯಧಿಕ ಅಡಿಕೆ ಮಾರಾಟ ಜೀನತ್ ಪಂಬೆತ್ತಾಡಿ , ಚಂದ್ರಶೇಖರ ಶಾಸ್ತ್ರಿ ಚಿರಶ್ಯಾಮಲ, ಅತ್ಯಧಿಕ ಕೊಕ್ಕೋ ಮಾರಾಟ ಹನೀಫ್ ಪೊಳೆಂಜ, ಡಾ.ಲೀಲಾವತಿ, ಅತ್ಯಧಿಕ ರಬ್ಬರ್ ಮಾರಾಟ ಯೋಗೇಶ್ ಚಿದ್ಗಲ್, ಷಣ್ಮುಖ ಕೆರೆಯಡ್ಕ, ಅತ್ಯಧಿಕ ಗೊಬ್ಬರ ಖರೀದಿ ಭೀಮ ಶಾಸ್ತ್ರಿ ಗಟ್ಟಿಗಾರು, ಶ್ರೀಮತಿ ಇಂದಿರಾ ಜೆ ರೈ ಕೇನ್ಯ, ಅತ್ಯಧಿಕ ಪೈಪು ಮತ್ತು ಬಿಡಿ ಭಾಗ ಖರೀದಿ ರಾಧಾಕೃಷ್ಣ ಪೈಸಾರಿ, ರಾಮಯ್ಯ ಗೌಡ ಚಿದ್ಗಲ್ಲು,ಅತ್ಯಧಿಕ ಗ್ರಹ ಬಳಕೆ ಸಾಮಗ್ರಿ ಖರೀದಿ ದಯಾನಂದ ಕಿನ್ನಿಕುಮೇರಿ, ರಾಧಾಕೃಷ್ಣ ಎಣ್ಣೆಮಜಲು, ಅತ್ಯುತ್ತಮ ಗ್ರಾಹಕರು ಚಂದ್ರಶೇಖರ ಶಾಸ್ತ್ರಿ ಚಿರಶ್ಯಾಮಲ, ಕೋಮಲ ಪಿ ನೆಕ್ಕಿಲ , ಅತ್ಯುತ್ತಮ ನವೋದಯ ಸ್ವ-ಸಹಾಯ ಗುಂಪುಗಳಾಗಿ ಬ್ರಹ್ಮಶ್ರೀ ನವೋದಯ ಸ್ವ-ಸಹಾಯ ಗುಂಪು ಅಳ್ಪೆ ಚಿಂಗಾಣಿಗುಡ್ಡೆ, ಷಣ್ಮುಖ ಮಹಿಳಾ ನವೋದಯ ಸ್ವಸಹಾಯ ಗುಂಪು ಕಾರ್ಜ, ಕಾರ್ತಿಕೇಯ ಮಹಿಳಾ ನವೋದಯ ಸ್ವಸಹಾಯ ಗುಂಪು ಕೂತ್ಕುಂಜ, ಮೂಕಾಂಬಿಕಾ ಮಹಿಳಾ ನವೋದಯ ಸ್ವ-ಸಹಾಯ ಗುಂಪು ನೇಲ್ಯಡ್ಕ ಗೌರವ ಸ್ವೀಕರಿಸಿದರು.ಸಾಲವನ್ನು ವಾಯಿದೆಗೆ ಸರಿಯಾಗಿ ಮರುಪಾವತಿಸಿದ ಎಲ್ಲಾ ಸದಸ್ಯರ ಪೈಕಿ ಸ್ಥಳದಲ್ಲಿ ಅದೃಷ್ಟ ಚೀಟಿ ತೆಗೆದು ಐವರನ್ನು ಸನ್ಮಾನಿಸಲಾಯಿತು. ಮಹಾಸಭೆಯಲ್ಲಿ ಹಾಜರಿದ್ದ ಐದು ಅದೃಷ್ಟ ಶಾಲಿ ಸದಸ್ಯರನ್ನು ಲಕ್ಕಿ ಚೀಟಿ ತೆಗೆದು ಆಯ್ಕೆ ಮಾಡಿ ಸುಬ್ರಹ್ಮಣ್ಯ ಕುಕ್ಕೆ ಸಿಲ್ಕ್ ಪ್ರಾಯೋಜಕತ್ವದಲ್ಲಿ ಸೀರೆಗಳನ್ನು ಬಹುಮಾನವಾಗಿ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ, ನಿರ್ದೇಶಕರಾದ ಚಂದ್ರಶೇಖರಶಾಸ್ತ್ರಿ ಸಿ, ಶ್ರೀಕೃಷ್ಣಭಟ್ ಪಟೋಳಿ, ರಘುನಾಥ ರೈ ಕೆರೆಕ್ಕೋಡಿ, ವಾಚಣ್ಣ ಕೆರೆಮೂಲೆ, ಗಣೇಶ ಪೈ, ಚಿನ್ನಪ್ಪ ಗೌಡ ಚೊಟ್ಟೆಮಜಲು, ಕಿಟ್ಟಣ್ಣ ಪೂಜಾರಿ ಕಾಂಜಿ , ಶ್ರೀಮತಿ ಮೋಹಿನಿ ಬೊಳ್ಮಲೆ, ಶ್ರೀಮತಿ ಹೇಮಲತಾ ಚಿದ್ಗಲ್, ಮುದರ ಐವತ್ತೊಕ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಗಂಗಾಧರ ನಾಯ್ಕ ಪಲ್ಲತ್ತಡ್ಕ ಮತ್ತು ಅನಂತಕೃಷ್ಣ ಭಟ್ ಕಲ್ಲೇರಿ ದೀಪ ಪ್ರಜ್ವಲನೆ ಗೊಳಿಸಿದರು.ಮಾಧವ ಪಂಜ ಪ್ರಾರ್ಥಿಸಿದರು.ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ವಾರ್ಷಿಕ ವರದಿ ವಾಚಿಸಿದರು.ಲೋಹಿತ್ ಎಣ್ಣೆಮಜಲು ನಿವ್ವಳ ಲಾಭ ವಿಂಗಡಣೆ ವಾಚಿಸಿದರು.ಚಂದ್ರಶೇಖರ ಇಟ್ಯಡ್ಕ ಸನ್ಮಾನಿತರ ಪಟ್ಟಿಯಾಚಿಸಿದರು.ಸಂಘದ ನಿರ್ದೇಶಕ ವಾಚಣ್ಣ ಕೆರೆಮೂಲೆ‌ ವಂದಿಸಿದರು.