ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ಮೃತ ಕುಟುಂಬಕ್ಕೆ 50 ಸಾವಿರ ವಿಮಾ ಮೊತ್ತ ವಿತರಣೆ

0

 

 

ಒಡಿಯೂರು ಶ್ರೀ ವಿವಿದೊದ್ದೇಶ ಸೌಹಾರ್ದ ಸಹಕಾರಿ

ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆ ಇದರ ವತಿಯಿಂದ ಮೃತರ ಕುಟುಂಬಕ್ಕೆ ಜೀವ ವಿಮಾ ಮೊತ್ತದ ಚೆಕ್ ನ್ನು ಸಹಕಾರಿ ಸಂಘದ ಕಚೇರಿಯಲ್ಲಿ ಸೆ.20 ರಂದು ವಿತರಿಸಲಾಯಿತು.

ಆಲೆಟ್ಟಿ ಗ್ರಾಮದ ಶ್ರೀ ಸದಾಶಿವ ಸ್ವ ಸಹಾಯ ಸಂಘದ ಸದಸ್ಯ ಶ್ರೀಧರ ಕುಡೆಕಲ್ಲು ರವರು ಇತ್ತೀಚೆಗೆ ಮೃತರಾಗಿದ್ದು ಅವರ ಕುಟುಂಬಕ್ಕೆ ಜೀವ ವಿಮೆಯ ಮೊತ್ತ ರೂ.50 ಸಾವಿರ ಮಂಜೂರಾಗಿತ್ತು. ಮೃತರು ಸಾಲಗಾರರಾಗಿದ್ದು ಬಾಕಿ 12,960/- ಹೊರಬಾಕಿ ಸಾಲವಿದ್ದು ಅದನ್ನು ಕಡಿತಗೊಳಿಸಿ ಉಳಿದ ಮೊತ್ತ ರೂ.37,040/- ನ್ನು ಮೃತರ ತಾಯಿ ಶ್ರೀಮತಿ ಬುರುಡಿಯವರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್, ಯೋಜನೆಯ ತಾಲೂಕು ಮೇಲ್ವಿಚಾರಕಿ ಗೀತಾ ನೆಟ್ಟಾರು, ಸಂಪಾಜೆ ವಲಯ ಸಂಯೋಜಕಿ ರೇವತಿ ಮೊರಂಗಲ್ಲು ಉಪಸ್ಥಿತರಿದ್ದರು.