ಬೆಳ್ಳಾರೆ ಯಾದವ ಸಭಾ ಪ್ರಾದೇಶಿಕ ಸಮಿತಿಯ ಮಹಾಸಭೆ

0

ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ 2021-22 ಸಾಲಿನ ಮಹಾಸಭೆಯು ಅ.09 ರಂದು ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷ ಆನಂದ ಉಮಿಕ್ಕಳ ವಹಿಸಿದರು.


ವೇದಿಕೆಯಲ್ಲಿ ಅತಿಥಿಗಳಾಗಿ ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರಾದ ಎ. ಕೆ ಮಣಿಯಾಣಿ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ರಾಜೀವಿ ಪರ್ಲಿಕಜೆ, ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಳ್ಳಾರೆ ಕಾರ್ಯದರ್ಶಿ ಶಶಿಧರ ಮಣಿಯಾಣಿ ಬೀಡು, ಕೋಶಾಧಿಕಾರಿ ನಾರಾಯಣ ಮಣಿಯಾಣಿ ಬೀಡು, ಜೊತೆ ಕಾರ್ಯದರ್ಶಿ ಶಶಿಪ್ರಭ ಪೆರುವಾಜೆ ಉಪಸ್ಥಿತರಿದ್ದರು.
ಸಭೆಯಲ್ಲಿ 2021-22 ನೇ ಸಾಲಿನ ವರದಿಯನ್ನು ಶಶಿಧರ ಮಣಿಯಾಣಿ ಬೀಡು ವಾಚಿಸಿದರು, ಲೆಕ್ಕಪತ್ರ ಶಶಿಪ್ರಭ ಪೆರುವಾಜೆ ಮಂಡಿಸಿದರು. ನಾರಾಯಣ ಮಣಿಯಾಣಿ ಬೀಡು ಸ್ವಾಗತಿಸಿ, ವಂದಿಸಿದರು. ಚಂದ್ರಹಾಸ ಮಣಿಯಾಣಿ ಪಡ್ಪು ಕಾರ್ಯಕ್ರಮ ನಿರೂಪಸಿದರು.