ಕುಂಬರ್ಚೋಡು ಮಸೀದಿಗೆ ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ 10ಸಾವಿರ ಸಹಾಯಧನ

0

 

ಮುಹಿಯದ್ದಿನ್ ಜುಮಾ ಮಸೀದಿ ಕುಂಬರ್ಚೋಡು ಬೋಳುಬೈಲ್ ಇಲ್ಲಿನ ಮಸೀದಿ ಮದರಸ ಅಭಿವೃದ್ಧಿ ಕಾಮಗಾರಿಗಳಿಗೆ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವತಿಯಿಂದ ರೂಪಾಯಿ 10 ಸಾವಿರ ಧನಸಹಾಯ ವನ್ನು ಸ್ಥಾಪಕದಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಮಸೀದಿಯ ಅಧ್ಯಕ್ಷ ಹನೀಫ್ ಹಾಜಿ ಯವರಿಗೆ ನಿನ್ನೆ ಮಸೀದಿಯಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿದರು ಮುಖ್ಯ ಅತಿಥಿ ನೆಲೆಯಿಂದ ಮಾತನಾಡಿ ಪ್ರವಾದಿಯವರ ಕೀರ್ತನೆ ಸಾಮಾಜಿಕ ಕ್ಷೇತ್ರದಲ್ಲಿ ಯುವಕರು ಹೆಚ್ಚಾಗಿ ಭಾಗವಹಿಸಲು ಕೋಮು ಸೌಹಾರ್ದತೆಗೆ ಹೆಚ್ಚು ಒತ್ತು ಕೊಡಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹನೀಫ್ ನಿಜಾಮಿ ಕಾಸರಗೋಡು ಮೀಲಾದ್ ಸಂದೇಶ ನೀಡಿದರು ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದರು ಕೆ ಎಂ ಮುಸ್ತಾಫ, ಹಮೀದ್ ಹಾಜಿ ಅಬ್ದುಲ್ ರಹ್ಮಾನ್ ಮೊಗರ್ಪಣೆ, ಶರೀಫ್ ಟಿ ಎ, ಅಹಮದ್ ಹಾಜಿ ಸವನೂರು, ಇಬ್ರಾಹಿಂ ಕತರ್, ಹಾರಿಸ್ ಚೆರ್ಕಳ, ಶರೀಫ್ ಇಂಜಿನಿಯರ್ ಭಾಗವಹಿಸಿದರು.ಅಶ್ರಫ್ ಮುಸ್ಲಿಯರ್ ಸ್ವಾಗತಿಸಿ ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕೊನೆಯಲ್ಲಿ ಸರ್ವರಿಗೂ ಸೀರಾಣಿ ವಿತರಿಸಯಿತು.