ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಬ್ರಹ್ಮಕಲಶ ಸಮಿತಿಯ ವಾರ್ಡ್ ಸಮಿತಿಯ ಆಯ್ಕೆ

0

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ಬ್ರಹ್ಮಕಲಶವು 2023 ಫೆ.04 ರಿಂದ 09 ರ ವರೆಗೆ ನಡೆಯಲಿದ್ದು ಇದರ ವಾರ್ಡ್ ಸಮಿತಿ ರಚನೆ ಪ್ರಾರಂಭಗೊಂಡಿದ್ದು ನಗರ ಪಂಚಾಯತ್‌ನ ೨೦ ವಾರ್ಡ್‌ಗಳಲ್ಲಿ ಕೂಡ ಮಹಿಳಾ ಮತ್ತು ಪುರುಷರ ಸಮಿತಿಯ ರಚನೆಯು ಪ್ರಾರಂಭಗೊಂಡಿದ್ದು ಈಗಾಗಲೇ 5 ಸಮಿತಿಗಳು ರಚನೆಗೊಂಡಿರುತ್ತದೆ.

ನ.06 ರಂದು ಬೆಟ್ಟಂಪಾಡಿಯ ಮಂಜುನಾಥ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ದಾಮೋಧರ ಮಂಚಿಯವರು ಮಾತನಾಡಿ ಸಮಿತಿ ರಚನೆ ಬಗ್ಗೆ ವಿವರಿಸದರು ನಂತರ ಬ್ರಹ್ಮಕಲಶ ಸಮಿತಿಯ ಆರ್ಥಿಕ ಸಂಚಾಲಕ ನಾರಾಯಣ ಕೇಕಡ್ಕರವರು ಒಟ್ಟಾಗಿ ಕಾರ್ಯಕ್ರಮ ನಡೆಸಲು ಪ್ರತೀ ವಾರ್ಡ್‌ನಿಂದ ಭಕ್ತರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಮತ್ತು ವಾರ್ಡ್ ಸಮಿತಿಯ ಬಗ್ಗೆ ಸಭೆಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಕೆ.ಉಮೇಶ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೃಷ್ಣ ಬೆಟ್ಟ, ಆನಂದ ನಡುಮುಟ್ಲು, ಜೀರ್ಣೋದ್ಧಾರ ಸಮಿತಿ ಕಾರ್‍ಯದರ್ಶಿ ಕುಸುಮಾಧರ ಎ.ಟಿ, ಕೋಶಾಧಿಕಾರಿ ಹರೀಶ್ ರೈ ಉಬರಡ್ಕ ಮತ್ತು ಬೆಟ್ಟಂಪಾಡಿಯ ನಾಗರಿಕರು ಸಭೆಯಲ್ಲಿ ಉಪಸ್ಥಿತರಿದ್ದರು. ಉಪಸಮಿತಿಯ ಸಂಚಾಲಕರಾಗಿ ಮಲ್ಲೇಶ್ ಬೆಟ್ಟಂಪಾಡಿ ಮತ್ತು ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಘಟಕದ ಸಂಚಾಲಕರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿ ಹರೀಶ್ ರೈ ಉಬರಡ್ಕ ವಂದಿಸಿದರು.