ಮುರುಳ್ಯ ಗ್ರಾಮದ ಮದ್ಕೂರು ಬೂಪಣ್ಣರವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನ. 17 ರಂದು ರಾತ್ರಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಪ್ರಗತಿಪರ ಕೃಷಿಕರಾಗಿದ್ದ ಅವರು ಪತ್ನಿ ಕುಸುಮಾವತಿ, ಪುತ್ರ ರಾಜೇಶ್ ಸೊಸೆ ಶೃತಿ, ಪುತ್ರಿಯರಾದ ಪುಷ್ಪಾವತಿ ಬೆಳಿಯಪ್ಪ ಗೌಡ ಕಮಿಲ, ಆಶಲತಾ ಬೆಳಿಯಪ್ಪ ಗೌಡ ಪುತ್ಯ ಪಂಜ, ಎಡಮಂಗಲ ಗ್ರಾಮ ಪಂಚಾಯಿತಿ ಪಿಡಿಒ ಭವ್ಯ ಶಿವಪ್ರಸಾದ್ ಪೆರ್ಲಂಪಾಡಿ, ದಿವ್ಯ ವಿಜಯ ಮರ್ಧಳ ಮೊಮ್ಮಕ್ಕಳು ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.