ಶ್ರೀ ಮಧೂರು ಕ್ಷೇತ್ರದ ಜೀರ್ಣೋದ್ದಾರ ಬಗ್ಗೆ ಮಂಡೆಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇಣಿಗೆ ಸಂಗ್ರಹಣೆ

0


ಶ್ರೀ ಮಧೂರು ಕ್ಷೇತ್ರದ ಜೀರ್ಣೋದ್ಧಾರಕ್ಕೆ ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿಯ ನೇತೃತ್ವದಲ್ಲಿ ದೇಣಿಗೆ ಸಂಗ್ರಹಣೆ ಪ್ರಾರಂಭಗೊಂಡಿದ್ದು ಮೊದಲಿಗೆ ಮಂಡೆಕೋಲು ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ವ್ಯವಸ್ಥಾಪಕ ಅಧ್ಯಕ್ಷ ಕೇಶವಮೂರ್ತಿ ಮಿಥಿಲ ಇವರು ದೇಣಿಗೆ ನೀಡುವುದರ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಬೆಳ್ಳಾರೆ, ರಾಮಚಂದ್ರ ಯದುಗಿರಿ, ರಾಮಚಂದ್ರ ಮಾಸ್ಟರ್ ಕೇನಾಜೆ, ಕರುಣಾಕರ ಕೇನಾಜೆ, ದಾಮೋಧರ ಕೇನಾಜೆ, ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ರಾಮಚಂದ್ರ ಕಣೆಮರಡ್ಕ, ಕ್ಷೇತ್ರ ಅರ್ಚಕರಾದ ಉಲ್ಲಾಸ್ ಕುಮಾರ್, ಗುಮಾಸ್ತ ನಾರಾಯಣ ಗೌಡ ಮಾವಂಜಿ ಮೊದಲಾದವರು ಉಪಸ್ಥಿತರಿದ್ದರು.