ಸುಳ್ಯ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಮಹಾಸಭೆ, ಅಧ್ಯಕ್ಷರಾಗಿ ತಾಜ್ ಮಹಮ್ಮದ್ ಕಲ್ಲುಗುಂಡಿ, ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ, ಖಜಾಂಜಿ ಎಸ್.ಎ ಹಮೀದ್ ಹಾಜಿ ಸುಳ್ಯ ಆಯ್ಕೆ

0

ಸಮಸ್ತ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಸುಳ್ಯ ರೇಂಜ್ ಇದರ ವಾರ್ಷಿಕ ಮಹಾ ಸಭೆಯು ಅರಂಬೂರು ಮದರಸ ಸಭಾಂಗಣದಲ್ಲಿ ಅಧ್ಯಕ್ಷರಾದ ತಾಜ್ ಮ್ಮೊಹಮ್ಮದ್ ಕಲ್ಲುಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ದುವಾವನ್ನು ಅರಂಬೂರು ಜುಮಾ ಮಸೀದಿಯ ಖತೀಬರಾದ ಮೂಸ ಮಕ್ದೂಮಿ ನೆರವೇರಿಸಿದರು. ಜಮಿಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಯು.ಪಿ. ಬಶೀರ್ ವರಧಿವಾಚಿಸಿ ಲೆಕ್ಕಪತ್ರವನ್ನು ಮಂಡಿಸಿದರು. ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಸಮಿತಿಯ ಪ್ರಧಾನಕಾರ್ಯದರ್ಶಿ ರಫಿಕ್ ಹಾಜಿ ಕೋಡಾಜೆ ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದರು. ವೇಧಿಕೆಯಲ್ಲಿ ಎಸ್.ವೈ.ಎಸ್ ಅಧ್ಯಕ್ಷ ಇಬ್ರಾಹಿಂ ಹಾಜಿ ಕತ್ತರ್ ಹಾಗೂ ಬೆಳ್ಳಾರೆ ಶಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಮಂಗಳ ಉಪಸ್ಥಿತರಿದ್ದರು. ಸಭೆಯಲ್ಲಿ ಮುಂದಿನ ಸಾಲಿನ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ತಾಜ್ ಮಹಮ್ಮದ್ ಕಲ್ಲುಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಯು.ಪಿ. ಬಶೀರ್ ಬೆಳ್ಳಾರೆ, ಕೋಶಾಧಿಕಾರಿಯಾಗಿ ಎಸ್.ಎ. ಹಮೀದ್ ಹಾಜಿ ಸುಳ್ಯ, ಉಪಾಧ್ಯಕ್ಷರಾಗಿ ಆಲಿಹಾಜಿ ಪೇರಡ್ಕ, ಹನೀಫ್ ನೆಟ್ಟಾರು, ಜತೆ ಕಾರ್ಯದರ್ಶಿಯಾಗಿ ಅಮೀರ್ ಕುಕ್ಕುಂಬಳ ಅರಂತೋಡು, ಶಾಫಿ ಅಜ್ಜಾವರ, ವರ್ಕಿಂಗ್ ಕಾರ್ಯದರ್ಶಿಯಾಗಿ ಇಕ್ಬಾಲ್ ಸುಣ್ಣಮೂಲೆ, ಪತ್ರಿಕಾ ಕಾರ್ಯದರ್ಶಿಯಾಗಿ ಅಶ್ರಫ್ ಗುಂಡಿ ಅರಂತೋಡು ಆಯ್ಕೆಯಾದರು, ಹಾಗೂ ಜಿಲ್ಲಾ ಸಮಿತಿಗೆ ಅಬ್ಬಾಸ್ ಹಾಜಿ ಸಂಟ್ಯಾರ್ ಮತ್ತ್ತು ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿಯವರನ್ನು ನೇಮಕ ಮಾಡಲಾಯಿತು.