ಸುಳ್ಯದಲ್ಲಿ ನಡೆಯಲಿರುವ ದತ್ತ ಶೋಭಾ ಯಾತ್ರೆಯ ಪ್ರಚಾರಾರ್ಥದ ಸ್ಟಿಕ್ಕರ್ ಬಿಡುಗಡೆ

0

ಸುಳ್ಯ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಖಂಡದ ಆಶ್ರಯದಲ್ಲಿ ಡಿ.7 ರಂದು ಸುಳ್ಯದಲ್ಲಿ ನಡೆಯಲಿರುವ ದತ್ತ ಮಾಲಾಧಾರಿಗಳ ಶೋಭಾಯಾತ್ರೆಯ ಪ್ರಚಾರಾರ್ಥವಾಗಿ ಹಮ್ಮಿಕೊಂಡಿರುವ ಸ್ಟಿಕ್ಕರ್ ನ್ನು ಕಲ್ಕುಡ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಕಲ್ಕುಡ ದೈವಸ್ಥಾನದ ಧರ್ಮದರ್ಶಿ ಉಮೇಶ್ ಪಿ.ಕೆ ಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು, ಸಂಘಟನೆಯ ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ, ಸಹ ಸಂಯೋಜಕ ನವೀನ್ ಸುಳ್ಳಿ, ಸನತ್,ಸುರಕ್ಷಾ ಪ್ರಮುಖ್ ಅರವಿಂದ, ಗೋರಕ್ಷಾ ಪ್ರಮುಖ್ ಪ್ರಕಾಶ್ ಯಾದವ್,
ನವೀನ್ ಎಲಿಮಲೆ, ವರ್ಷಿತ್ ಚೊಕ್ಕಾಡಿ,ರೂಪೇಶ್, ವಿಘ್ನೇಶ್ ಆಚಾರ್ಯ,
ದುರ್ಗಾವಾಹಿನಿ ಸಂಚಾಲಕಿ ನಮಿತಾ ರಾವ್ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.