ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸ್ವಚ್ಛತಾ ಕಾರ್ಯಕ್ರಮ

0


ಶ್ರೀ ಧರ್ಮಸ್ಥಳ ’ಶೌರ್ಯ’ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯ ಇವರ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ವಿಶೇಷ ಪೂಜೆ ಹಾಗೂ ದೇವಸ್ಥಾನದ ವಠಾರದ ಸ್ವಚ್ಛತಾ ಕಾರ್ಯಕ್ರಮವನ್ನು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ನೆರವೇರಿಸಿದರು.


ಈ ಸಂದರ್ಭದಲ್ಲಿ ಸಂಯೋಜಕರಾದ ಪಿ.ಜಿ. ಜಯರಾಮ್, ಹರ್ಷಿತ್, ಸುನಿಲ್, ಪ್ರಶಾಂತ್, ಮಧುಸೂದನ, ಜಯಪ್ರಕಾಶ, ಯತೀಶ, ಸುರೇಶ್, ರತಿಶನ್ ಅರಂಬೂರು, ಅನಂತ ಬೂಡುಪನ್ನೆ, ಕಮಲ ನಾಗಪಟ್ಟಣ ಮೊದಲಾದವರಿದ್ದರು.