ಕುಕ್ಕೆ ಸುಬ್ರಹ್ಮಣ್ಯ: ಪಂಚಮಿ ರಥೋತ್ಸವ

0

ಕುಕ್ಕೆ ಶ್ರೀ ಸುಬ್ರಮಣ್ಯ ದೇವರ ಷಷ್ಠಿ ಉತ್ಸವಕ್ಕೆ ವಾಡಿಕೆಯಂತೆ ಪಂಚಮಿ ದಿನ ರಾತ್ರಿ ಪಂಚಮಿ ರಥೋತ್ಸವ ಅದ್ದೂರಿಯಿಂದ ನಡೆಯಿತು. ರಾತ್ರಿ ಸುರಿದ ಮಳೆಯಿಂದ ರಥಗಳಿಗೆ ವರಣಾಭಿಷೇಕ ವಾದಂತಾಯಿತು. ಹೊರಾಂಗಣದಲ್ಲಿ ದೇವರ ಪಾಲಕಿ ಉತ್ಸವ ನಡೆದಿದ್ದು ಬಳಿಕ ದೇವರು ರಥಾರೂಡರಾಗಿ ಕಾಶಿಕಟ್ಟೆಗೆ ತರಳಿ ಪೂಜೆ ಸ್ವೀಕರಿಸಿದರು. ಸವಾರಿ ಮಂಟಪ ಬಳಿ ಪೂಜೆ ಸ್ವೀಕರಿಸುವ ವೇಳೆ ಅದ್ದೂರಿಯ ಸಿಡಿ ಮದ್ದು ಪ್ರದರ್ಶನ ನಡೆಯಿತು.
ಷಷ್ಠಿಗೆ ಯಾವುದೇ ಅಡೆತಡೆಗಳು ಇಲ್ಲದೇ ಸುಸೂತ್ರವಾಗಿ ಷಷ್ಠಿ ಉತ್ಸವಗಳು ನಡೆದಿದ್ದು ವಾಡಿಕೆಯಂತೆ ವರಣನ ಸಿಂಚನವು ನಡೆಯಿತು. ಪಂಚಮಿ ದಿನ ಜೋರಾಗಿ ಸುರಿದ ಮಳೆಯಿಂದ ಭಕ್ತಾಧಿಗಳಿಗೆ, ವ್ಯಾಪಾರಸ್ಥರು ಮಾತ್ರ ಅಲ್ಪ ತೊಂದರೆ ಉಂಟಾಯಿತು.