ಪ್ರೆಸ್ ಕ್ಲಬ್ ಕಟ್ಟಡ ಉದ್ಘಾಟನೆ ಪ್ರಚಾರಾರ್ಥ ಬೈಕ್ ರ್‍ಯಾಲಿ

0

ಸುಳ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರೆಸ್ ಕ್ಲಬ್ ಕಟ್ಟಡ ಉದ್ಘಾಟನೆಯು ನ.30 ರಂದು ಉದ್ಘಾಟನೆಗೊಳ್ಳಲಿದ್ದು, ಇದರ ಪ್ರಚಾರಾರ್ಥವಾಗಿ ಬೈಕ್ ರ್‍ಯಾಲಿಯು ನ.29 ರಂದು ಬೆಳಿಗ್ಗೆ ಜರುಗಿತು.
ಪೈಚಾರಿನಿಂದ ಆರಂಭಗೊಂಡ ಬೈಕ್ ರ್‍ಯಾಲಿಗೆ ಎ.ಸಿ.ಎಫ್. ಪ್ರವೀಣ್ ಶೆಟ್ಟಿ ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿ, ಶುಭಹಾರೈಸಿ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕೋಶಾಧಿಕಾರಿ ಯಶ್ವಿತ್ ಕಾಳಂಮನೆ, ಸ್ಥಾಪಕಾಧ್ಯಕ್ಷ ಜೆ.ಕೆ.ರೈ, ಸೇರಿದಂತೆ ಪ್ರೆಸ್ ಕ್ಲಬ್ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಬೈಕ್ ರ್‍ಯಾಲಿಯು ಪೈಚಾರಿನಿಂದ ಹೊರಟು ಹಳೆಗೇಟು, ಜ್ಯೋತಿ ಸರ್ಕಲ್, ಮೂಲಕ ಸುಳ್ಯ ನಗರವನ್ನು ಪ್ರವೇಶಿಸಿ, ಗಾಂಧಿನಗರ, ವಿಷ್ಣುಸರ್ಕಲ್ ತನಕ ಸಾಗಿ, ರಥಬೀದಿಯ ಮೂಲಕ ಕೆ.ವಿ.ಜಿ. ಸರ್ಕಲ್, ವಿವೇಕಾನಂದ ಸರ್ಕಲ್ ಮೂಲಕ ಸಾಗಿ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರೆಸ್ ಕ್ಲಬ್ ತನಕ ಸಾಗಿ ಬಂದಿತು.