ಪುತ್ತೂರಿನಲ್ಲಿ ನೆಟ್ಟಾರು ಫಿನ್ ಸರ್ವ್ ಶುಭಾರಂಭ

0

ವಿನೋದ್ ಕುಮಾರ್ ನೆಟ್ಟಾರು ಮತ್ತು ಶ್ರೀಮತಿ ಶ್ರೀವಿದ್ಯಾ ನೆಟ್ಟಾರು ಮಾಲಕತ್ವದ ಮ್ಯೂಚ್ವಲ್ ಫಂಡ್ ವಿತರಣಾ ಸಂಸ್ಥೆ ನೆಟ್ಟಾರು ಫಿನ್ ಸರ್ವ್‌ ನ.28 ರಂದು ಪುತ್ತೂರಿನ ದರ್ಬೆಯಲ್ಲಿರುವ ಶ್ರೀ ಲಕ್ಷ್ಮೀ ಕಮರ್ಷಿಯಲ್ ಸೆಂಟರಿನ 2ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
ಒಶಿಮಾ ಸಿಸ್ಟಮ್ಸ್ ಪ್ರೈ.ಲಿ.ನ ಅಧ್ಯಕ್ಷರೂ, ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಕೂಡೂರು ರಾಮಚಂದ್ರ ಭಟ್ ಸಂಸ್ಥೆಯನ್ನು ಉದ್ಘಾಟಿಸಿದರು. ಪುತ್ತೂರು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ, ಎಸ್.ಬಿ.ಡಿ. ಫಂಡ್ಸ್ ಮ್ಯಾನೇಜ್ಮೆಂಟ್ ಲಿ.ನ ಸಹ ಉಪಾಧ್ಯಕ್ಷ ಹಾಗೂ ಕ್ಲಸ್ಟರ್ ಹೆಡ್ ಸುಹಾಸ್ ಪ್ರಭಾಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದಯಕುಮಾರ್ ನೆಟ್ಟಾರು, ಶ್ರೀಮತಿ ಪ್ರಸನ್ನ ಯು. ಭಟ್, ನೆಟ್ಟಾರು ವೆಂಕಟ್ರಮಣ ಭಟ್ ಸೇರಿದಂತೆ ವಿನೋದ್ ಕುಮಾರ್ ನೆಟ್ಟಾರು ಮತ್ತು ಶ್ರೀಮತಿ ಶ್ರೀವಿದ್ಯಾ ನೆಟ್ಟಾರುರವರ ಬಂಧುಗಳು, ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.