ಪಂಜದ ಬಾಲಕ ಉಪ್ಪಿನಂಗಡಿಯಲ್ಲಿ ಆತ್ಮಹತ್ಯೆ

0

ಪಂಜದ ಬಾಲಕನೋರ್ವ ಉಪ್ಪಿನಂಗಡಿಯ ಮಾವನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಏ.19 ರಂದು ನಡೆದಿದೆ.

ಪಂಜದ ಅಳ್ಪೆ ಬನ ದಿ.ರೋಹಿತ್ ಮತ್ತು ಶ್ರೀಮತಿ ರಮ್ಯ ದಂಪತಿಗಳ ಪುತ್ರ ಉಪ್ಪಿನಂಗಡಿ ಶ್ರೀ ರಾಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ನಂದನ್ ( 13) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ರೋಹಿತ್ ಕೆಲವು ವರ್ಷಗಳ ಹಿಂದೆಯಷ್ಟೇ ನಿಧನರಾಗಿದ್ದು, ರೋಹಿತ್ ರ ಪತ್ನಿ ರಮ್ಯಾ ರವರು ಮಕ್ಕಳೊಂದಿಗೆ ಅವರ ತವರು ಮನೆ ಉಪ್ಪಿನಂಗಡಿ ಕರಾಯ ದುಗಲಾಡಿಯಲ್ಲಿ ಇದ್ದು, ಮಕ್ಕಳು ಅಲ್ಲೇ ಶಾಲೆಗೆ ಹೋಗುತ್ತಿದ್ದರು.

ಏ.19 ರಂದು ನಂದನ್ ಇಂದೇ ತನ್ನ ಸೈಕಲ್ ದುರಸ್ತಿ ಮಾಡಲು ಕೊಂಡು ಹೋಗುವಂತೆ ಹಠ ಹಿಡಿದಿದ್ದ. ಆದರೆ ಮನೆಗೆ ಇನ್ ವರ್ಟರ್ ದುರಸ್ತಿಯವರು ಬಂದದ್ದರಿಂದ ಹೋಗಲಾಗಿರಲಿಲ್ಲ. ನಾಳೆ ಕೊಂಡೋಗುವುದಾಗಿ ಹೇಳಿದಾಗ ಸಮಾಧಾನ ಹೊಂದಿದ್ದ. ಸ್ವಲ್ಪ ಹೊತ್ತಿನಲ್ಲಿ ಆತ ಮನೆಯ ಕೋಣೆಯೊಳಗೆ ಹೋಗಿ ಕಿಟಕಿಗೆ ನೇಣು ಹಾಕಿ ಕೊಂಡು ಜಿಗಿದ್ದಿದ್ದಾನೆ.


ಮನೆಯವರಿಗೆ ವಿಷಯ ತಿಳಿದ ಕೂಡಲೇ ಕೋಣೆಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದು ಈ ವೇಳೆಗೆ ಆತ ಕೊನೆಯುಸಿರೆಳೆದಿದ್ದ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಪುತ್ತೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಬಳಿಕ ರಾತ್ರಿ ಪಂಜದ ಸ್ವಗೃಹಕ್ಕೆ ತಂದು ಅಂತ್ಯ ಸಂಸ್ಕಾರ ನಡೆಯಿತು.
ಕೆಲವು ಸಮಯದ ಹಿಂದೆ ನಂದನ್ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರು ತಾಯಿ, ಸಹೋದರ ವಿವೇಕ್, ಕುಟುಂಬಸ್ಥರನ್ನು ಅಗಲಿದ್ದಾರೆ
.