ಎಣ್ಮೂರು : ಕಲ್ಲೇರಿಯಲ್ಲಿ ಕಳ್ಳರ ಕರಾಮತ್ತು

0

ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಅಡಿಕೆ ಕದ್ದು ಸುಲಿದಿರುವ ಆಘಾತಕಾರಿ ಬೆಳವಣಿಗೆಯೊಂದು ಕಂಡುಬಂದಿದೆ. ಕಳ್ಳ ಯಾರೆಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಬಹುತೇಕ ರೈತರ ವಾಣಿಜ್ಯ ಬೆಳೆ ಅಡಿಕೆಗೀಗ ಕಳ್ಳರ ಕರಿನೆರಳು ಬಾಧಿಸಿದೆ. ಈ ಭಾಗದಲ್ಲಿ ಮೊದಲು ಬೀಟ್ ಪೊಲೀಸರ ಸಂಚಾರ ಇರುತ್ತಿದ್ದುದರಿಂದ ಅಷ್ಟೇನು ಸಮಸ್ಯೆ ಇರಲಿಲ್ಲ. ಇನ್ನಾದರೂ ಪೊಲೀಸರು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದು ಒಳಿತು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.