ಟಿ.ವಿ. ಹಾಗೂ ಬಿಎಸ್ಸೆನ್ನೆಲ್ ಕೇಬಲ್ ತುಂಡರಿಸಿದ ಕಿಡಿಗೇಡಿಗಳು

0

ಸುಳ್ಯದ ಪರಿವಾರಕಾನ ರಸ್ತೆ ಬದಿಯಲ್ಲಿ ಹಾದು ಹೋಗಿರುವ ಟಿವಿ ಕೇಬಲ್ ಹಾಗೂ ಬಿಎಸ್ಸೆನ್ನೆಲ್ ಕೇಬಲನ್ನು ಕಿಡಿಗೇಡಿಗಳು ತುಂಡರಿಸಿರುವ ಘಟನೆ ಡಿ.5 ರಂದು ರಾತ್ರಿ ವರದಿಯಾಗಿದೆ.

ರಾತ್ರಿ ಸುಮಾರು 9.10 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದ್ದು, ಗುರುಕೇಬಲ್ ನ ಸಿಬ್ಬಂದಿಗಳಿಗೆ ಗ್ರಾಹಕರಿಂದ ಫೋನ್ ಕರೆ ಬಂದಾಗ ಅವರು ಕೇಬಲ್ ಹೋದ ಜಾಗದಲ್ಲಿ ಪರಿಶೀಲನೆ ನಡೆಸಿದಾಗ, ಪರಿವಾರಕಾನದಲ್ಲಿ ಕೇಬಲ್ ತುಂಡರಿಸಿರುವುದು ಕಂಡು ಬಂತು.

ಈ ಕುರಿತು ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕೇಬಲ್ ನ ಸುಧಾಕರ್ ರವರು “ರಾತ್ರಿ 9.05. ಕ್ಕೆ ನಾನು ಪರಿವಾರಕಾನದಲ್ಲಿ ಹೋಗುತ್ತಿರುವಾಗ ಇಬ್ಬರು ಯುವಕರು ನಮ್ಮ ಕೇಬಲ್ ಇರುವ ಜಾಗದಲ್ಲಿ ಬೈಕ್ ನಲ್ಲಿ ಕುಳಿತಿರುವುದನ್ನು ನಾನು ನೋಡಿದ್ದೇನೆ. ನಾನು ಮುಂದಕ್ಕೆ ಹೋದೆ.‌ ಕೆಲವೇ ಕ್ಷಣದಲ್ಲಿ ಸಮಯದಲ್ಲಿ ಟಿವಿ ಕಾಣದಿರುವ ಕರೆ ಗ್ರಾಹಕರಿಂದ ಬಂತು. ಪರಿಶೀಲನೆ ನಡೆಸಿದಾಗ ಕೇಬಲ್ ಕತ್ತರಿಸಿರುವುದು ಕಂಡು ಬಂತು. ಅದು ಯಾರೆಂದು ಗೊತ್ತಾಗಿಲ್ಲ. ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.