ಮೈಸೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಇದರ ಆಶ್ರಯದಲ್ಲಿ ಸಾಂಕೇತಿಕ ದೀಪಾವಳಿ ಆಚರಣೆ

0

ಮೈಸೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಇದರ ಆಶ್ರಯದಲ್ಲಿ ಸಾಂಕೇತಿಕ ದೀಪಾವಳಿ ಆಚರಣೆ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಲಿಂಗಪ್ಪಗೌಡ ಸಣ್ಯಮನೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಂಘದ ಸ್ಥಾಪಾಕಾಧ್ಯಕ್ಷರಾದ ಗೋಪಾಲ್ ಕೃಷ್ಣ ಪೈ ರಾಜೇ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಗ್ರೇಶಿಯಸ್ ರೋಡ್ರಿಗಸ್, ಉತ್ತರಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾದ ತೇಜಸ್ವಿ ನಾಯಕ್ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಮೋಹನ್, ಯಡಮಂಗಲ ಸ್ವಾಗತಿಸಿ ರುದ್ರಪ್ಪ ಪಿಂಡಿ ಮನೆ ವಂದನಾರ್ಪಣೆಗೈದರು.

ಸಂಘದ ಹಿರಿಯ ಸದಸ್ಯರಾದ ಲಿಂಗಪ್ಪ ಗೌಡ ಸಣ್ಣಮನೆ, ವೆಂಕಪ್ಪಗೌಡ ವಕೀಲರು,

ರಾಘವಕಡಪಾಲ, ಮತ್ತು ದೀಪಾವಳಿ ಹಬ್ಬದ ಸಂಪೂರ್ಣ ಪೂಜೆ ಉತ್ಸವವನ್ನು ಮತ್ತು

ಬಲಿಯೇಂದ್ರ ಅಲಂಕಾರವನ್ನು ಮಾಡಿದ ಚಿನ್ನಪ್ಪ ಬಿಡಾರ ಇವರನ್ನು ಸನ್ಮಾನಿಸಲಾಯಿತು.

ಅಮಿತಕುಮಾರಿ ದೇವಶ್ಯ ಸನ್ಮಾನಿತರ ಪರಿಚಯವನ್ನು ಮಾಡಿಕೊಟ್ಟರು ವಿಶ್ವನಾಥ ದೇವ, ಹಾಗೂ ಚಿನ್ನಪ್ಪ ಕೊಲ್ಲಮೊಗ್ರ ಕಾರ್ಯಕ್ರಮದ ನಿರೂಪಿಸಿದರು.

ಕಾರ್ಯಕ್ರಮದ ನಂತರ ಕರಾವಳಿ ಶೈಲಿಯ ಭೋಜನ ವ್ಯವಸ್ಥೆ ಏರ್ಪಡಿಸಲಾಯಿತು.