ಅಡ್ಕಾರು: ಅಯ್ಯಪ್ಪ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಗೊನೆ ಮುಹೂರ್ತ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವತಿಯಿಂದ ಡಿ.15ರಂದು ಜರುಗಲಿರುವ ಅಯ್ಯಪ್ಪ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಡಿ.8ರಂದು ಮುಹೂರ್ತದ ಗೊನೆ ಕಡಿಯಲಾಯಿತು.

ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ನಾರಾಯಣ ಮಡಿವಾಳ ಅಡ್ಕಾರು, ಅಧ್ಯಕ್ಷ ಅಶೋಕ ಅಡ್ಕಾರು, ಪ್ರಧಾನ ಕಾರ್ಯದರ್ಶಿ ಮನು ಪದವು, ಖಜಾಂಜಿ ದಾಮೋದರ ಎ.ಎಸ್. ಅಡ್ಕಾರು, ಉತ್ಸವ ಸಮಿತಿ ಅಧ್ಯಕ್ಷ ಉದಯ ಮಣಿಯಾಣಿ ಪದವು, ಕೆ.ಪಿ. ಶಿವಪ್ರಸಾದ್ ಬೊಳುಬೈಲು, ಗುರುಸ್ವಾಮಿ ಚಂದ್ರಶೇಖರ (ಪುಟ್ಟು ), ಸತೀಶ್ ಪೂಜಾರಿ ಪದವು, ಎ.ಆರ್. ಬಾಬು ಅಡ್ಕಾರು, ತೀಕ್ಷಣ್ ಅಡ್ಕಾರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.