ಶಾಲೆಯ ಜಾಗದ ಮರಗಳನ್ನು ಅಕ್ರಮವಾಗಿ ಕಡಿದ ಆರೋಪ : ಎಸ್‌ಡಿಎಂಸಿಯಿಂದ ದೂರು

0

ಸುಳ್ಯ ಜ್ಯೋತಿ ವೃತ್ತದ ಬಳಿ ಇರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗಕ್ಕೆ ಸಂಬಂಧಿಸಿದ ಸ್ಥಳದಿಂದ ಬೃಹತ್ ಮರಗಳನ್ನು ಕಡಿದಿದ್ದಾರೆ ಎಂದು ಶಾಲಾ ಎಸ್‌ಡಿಎಂಸಿಯರವರು ಇಲಾಖೆಗೆ ಹಾಗೂ ಸಂಘಟನೆಗಳಿಗೆ ದೂರು ನೀಡಿರುವ ಘಟನೆ ನಡೆದಿದೆ.


ಸುಳ್ಯದ ಬಿ.ಆರ್. ಸಿ ಕಟ್ಟಡದ ಪಕ್ಕದಲ್ಲಿರುವ ಶಾಲಾ ಜಾಗದಲ್ಲಿ ಇದ್ದ ಮರವನ್ನು ಸರಕಾರಿ ಆಸ್ಪತ್ರೆಯವರ ಸಹಕಾರದಲ್ಲಿ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಕಡಿಯಲಾಗಿದೆ ಎಂದು ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಅಲ್ಲದೆ ಕನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸುಂದರ ಪಾಟಾಜೆಯವರಿಗೂ ಮನವಿ ಸಲ್ಲಿಸಲಾಗಿದೆ. ತಮ್ಮ ಸಂಘಟನೆಯ ಹೋರಾಟದ ಮುಖಾಂತರ ಶಾಲಾ ಜಾಗವನ್ನು ಸಂಪೂರ್ಣ ಸರ್ವೆ ಮಾಡಿಸಿಕೊಡಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷರು ಮನವಿಯಲ್ಲಿ ತಿಳಿಸಿದ್ದಾರೆ.