ಅರಂಬೂರು ಅಂಬಿಕಾ ಮಹಿಳಾ ಮಂಡಲದ ಮಹಾಸಭೆ

0

ಅರಂಬೂರು ಅಂಬಿಕಾ ಮಹಿಳಾ ಮಂಡಲದ ಮಹಾಸಭೆಯು ನ.೨೭ ರಂದು ಅಧ್ಯಕ್ಷೆ ಶ್ರೀಮತಿ ಕವಿತಾರವರ ಅಧ್ಯಕ್ಷತೆಯಲ್ಲಿ ಮುಕಾಂಬಿಕಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಶ್ರೀಮತಿ ಪ್ರಫುಲ್ಲ ರೈ, ಶ್ರೀಮತಿ ಹಾರಾವತಿ ಕೆ.ಸಿ., ಶ್ರೀಮತಿ ಲಕ್ಷ್ಮೀ ಭಟ್, ಶ್ರೀಮತಿ ಅಂಬಿಕಾ, ಶ್ರೀಮತಿ ಶ್ರೀದೇವಿ ಭಟ್ ಉಪಸ್ಥಿತರಿದ್ದರು.
ಶ್ರೀಮತಿ ಅಮಿತಾರವರು ವಾರ್ಷಿಕ ವರದಿಯನ್ನು ಮಂಡಿಸಿದರು. ೨೦೨೧-೨೨ ನೇ ಸಾಲಿನ ಲೆಕ್ಕಪತ್ರವನ್ನು ಶ್ರೀಮತಿ ಉಷಾಚಂದ್ರಶೇಖರ್ ಮಂಡಿಸಿದರು.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷೆಯಾಗಿ ಶ್ರೀಮತಿ ಅಮಿತಾ ರೈ, ಕಾರ್ಯದರ್ಶಿಯಾಗಿ ಶ್ರೀಮತಿ ವೇದಾವತಿ ನೆಡ್ಚಿಲು, ಉಪಾಧ್ಯಕ್ಷೆಯಾಗಿ ಶ್ರೀಮತಿ ಚಂದ್ರಾವತಿ ಬದಿಕಾನ, ಖಜಾಂಜಿಯಾಗಿ ಶ್ರೀಮತಿ ಹಾರಾವತಿ ಕೆ.ಸಿ., ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಶೋಭಾ ರೈ ಹಾಗೂ ನಿರ್ದೇಶಕರುಗಳಾಗಿ ಶ್ರೀಮತಿ ಉಷಾಚಂದ್ರಶೇಖರ್, ಶ್ರೀಮತಿ ಲಕ್ಷ್ಮೀ ಭಟ್, ಶ್ರೀಮತಿ ಪ್ರಫುಲ್ಲ ರೈ, ಶ್ರೀಮತಿ ಶ್ರೀದೇವಿ ಭಟ್, ಶ್ರೀಮತಿ ಸತ್ಯಭಾಮ ಭಟ್, ಶ್ರೀಮತಿ ಜ್ಯೋತಿ ಪೈ, ಶ್ರೀಮತಿ ಸರೋಜ ಮಜಿಗುಂಡಿ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ವೀಣಾ ನಾಯರ್, ಶ್ರೀಮತಿ ಶೋಭಿತಾ, ಶ್ರೀಮತಿ ಅಂಬಿಕಾ, ಶ್ರೀಮತಿ ಭಾರತಿ, ಶ್ರೀಮತಿ ಸುರಕ್ಷಾ ರೈ, ಶ್ರೀಮತಿ ದಿನಮಣಿ ಆಯ್ಕೆಯಾದರು.
ಶ್ರೀಮತಿ ಸುರಕ್ಷಾ ರೈ ಪ್ರಾರ್ಥಿಸಿ, ಶ್ರೀಮತಿ ಅಂಬಿಕಾ ಸ್ವಾಗತಿಸಿದರು. ಶ್ರೀಮತಿ ಶ್ರೀದೇವಿ ಭಟ್ ವಂದಿಸಿ, ಶ್ರೀಮತಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.