ಸುಳ್ಯದಲ್ಲಿ ಡಿ.16 ರಿಂದ ಮೂರು ದಿನ ನಡೆಯುವ ಕೃಷಿ ಮೇಳದ ಪ್ರಚಾರಾರ್ಥವಾಗಿ ತಾಲೂಕಿನಾಧ್ಯಂತ ಸುತ್ತಲಿದೆ ಕೃಷಿ ರಥ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಡಿ.16,17 ಮತ್ತು 18 ರಂದು ನಡೆಯುವ ಕೃಷಿ ಮೇಳದ ಪ್ರಚಾರಾರ್ಥವಾಗಿ ಕೃಷಿ ರಥ ಎರಡು ದಿನ ತಾಲೂಕಿನಾಧ್ಯಂತ ಸುತ್ತಲಿದ್ದು, ರಥಕ್ಕೆ ಇಂದು ಚಾಲನೆ ನೀಡಲಾಯಿತು.

ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಿದರು. ಉದ್ಯಮಿ ಆಗ್ರೋ ರಾಮಚಂದ್ರ, ತೋಟಗಾರಿಕಾ ಇಲಾಖಾ ಹಿರಿಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನ, ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ, ಕೃಷಿ ಮೇಳದ ಪ್ರಮುಖರಾದ ಡಾ.ಎನ್.ಎ.ಜ್ಞಾನೇಶ್, ಎಸ್.ಎನ್.ಮನ್ಮಥ, ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್ಲು, ಜಯರಾಮ ಮುಂಡೋಲಿಮೂಲೆ, ಯಶ್ವಿತ್ ಕಾಳಮ್ಮನೆ, ಮಂಜುನಾಥ ಮಡ್ತಿಲ, ಲೋಕೇಶ್ ಚೌಟಾಜೆ, ರಂಜಿತ್ ಅಡ್ತಲೆ ಇದ್ದರು.

ಕೃಷಿ ಮೇಳ ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.