ಸುಳ್ಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಪ್ರಯುಕ್ತ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.
ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡ ಕೃಷಿ ಮೆರವಣಿಗೆಗೆ ಸವಣೂರು ವಿದ್ಯಾಸಂಸ್ಥೆ ಗಳ ಸಂಚಾಲಕ ಸೀತಾರಾಮ ರೈ ಸವಣೂರು ಹಸಿರು ಧ್ವಜ ಹಾರಿಸಿ ಚಾಲನೆ ನೀಡಿದರು.
ಮೆರವಣಿಗೆ ಸಮಿತಿ ಸಂಚಾಲಕ ದೊಡ್ಡಣ್ಣ ಬರೆಮೇಲುರವರ ಉಸ್ತುವಾರಿಕೆಯಲ್ಲಿ ನಡೆದ ಮೆರವಣಿಗೆಯಲ್ಲಿ ಕೇರಳ ಚೆಂಡೆ, ಎನ್.ಸಿ.ಸಿ. ಬ್ಯಾಂಡ್ ಸೆಟ್, ನಾಸಿಕ್ ಬ್ಯಾಂಡ್, ಕಟ್ಟದ ಕೋಳಿ, ಕೃಷಿ ಉಳುಮೆಯ ಟ್ರಾಕ್ಟರ್, ಕಂಬಳದ ಕೋಣ ಮೆರವಣಿಗೆ ಆಕರ್ಷಣೆ ಯಾಗಿದ್ದವು.