ಸತ್ಸಂಗದಿಂದ ನಿಸ್ಸಂಗವಾಗುತ್ತದೆ. ನಿಸ್ಸಂಗವಾದರೆ ಮೋಹದಿಂದ ಮುಕ್ತವಾಗುತ್ತದೆ. ಆಗ ತತ್ವ ನೆಲೆಯಾಗುತ್ತದೆ, ಮುಕ್ತಿ ಸಿಗುತ್ತದೆ ಎಂದು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿಗೆ ಆಗಮಿಸಿರುವ ಅವರು ಕಳಂಜ ಕಜೆಮೂಲೆ ಚೆನ್ನಪ್ಪ ಗೌಡರ ಮನೆಯಲ್ಲಿ ಪರಿಸರದ ಗ್ರಾಮಗಳ ಪಾದ ಪೂಜೆ ಸ್ವೀಕರಿಸಿ ಅನುಗ್ರಹ ಭಾಷಣ ಮಾಡಿದರು.
ಸತ್ಯದ ಮತ್ತು ಸಜ್ಜನರ ಸಹವಾಸ ಮಾಡಿದರೆ ಪಶ್ಚಾತ್ತಾಪ ಉಂಟಾಗುವುದಿಲ್ಲ ಎಂದು ಅವರು ಹೇಳಿದರು.
ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಚೆನ್ನಪ್ಪ ಗೌಡ ಕಜೆಮೂಲೆ ಸ್ವಾಗತಿಸಿದರು. ಕಾರ್ಯಕ್ರಮದ ವಲಯ ಸಂಚಾಲಕ ಮುಗುಪ್ಪು ಕೂಸಪ್ಪ ಗೌಡ ಪ್ರಸ್ತಾವನೆಗೈದರು. ನಾರಾಯಣ ಶೇಡಿಕಜೆ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ಕಜೆಮೂಲೆ ಪ್ರಾರ್ಥಿಸಿದರು.
ಸ್ವಾಮೀಜಿಯವರನ್ನು ಸಿಂಗಾರಿ ಮೇಳ, ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಲಾಯಿತು.