ಧಾರವಾಡದಲ್ಲಿ ಭೀಮರಾವ್ ವಾಷ್ಠರ್ ಮ್ಯೂಸಿಕ್ ಆಲ್ಬಮ್ ಗೆ ಬೆಸ್ಟ್ ಮ್ಯೂಸಿಕ್ ಆಲ್ಬಮ್ ಅವಾರ್ಡ್ ಪ್ರದಾನ

0

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ( ರಿ) ಧಾರವಾಡ ರವರು ಆಯೋಜಿಸಿದ್ದ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ , ಸಾಹಿತಿ ಮತ್ತು ಗಾಯಕರಾದ ಎಚ್ ಭೀಮರಾವ್ ವಾಷ್ಠರ್ ರವರು ಸಾಹಿತ್ಯ ಬರೆದು ಹಾಡಿರುವ ನಾಗರಹಾಳ ಗುರುಬಾಬಾ ಮ್ಯೂಸಿಕ್ ಆಲ್ಬಮ್ ಗೆ ಧಾರವಾಡದಲ್ಲಿ ಬೆಸ್ಟ್ ಮ್ಯೂಸಿಕ್ ಆಲ್ಬಮ್ ಅವಾರ್ಡ್ ಬಂದಿದೆ . ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ( ರಿ) ಧಾರವಾಡ ಇದರ ಅಧ್ಯಕ್ಷರಾದ ಶಂಕರ್ ಸುಗತೆ ಮತ್ತು ಖ್ಯಾತ ಚಿತ್ರನಟಿ ರೂಪಿಕಾ ರವರು ಅವಾರ್ಡ್ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಲಡ್ಡುಮುತ್ಯಾ ಚಲನಚಿತ್ರದ ಖ್ಯಾತಿಯ ನಿರ್ದೇಶಕರಾದ ಅರವಿಂದ್ ಮುಳುಗುಂದ , ಸಿನಿಮಾ ಪಿ ಆರ್ ಓ ಪ್ರಭು ಗಂಜಿಹಾಳ , ನಿರ್ದೇಶಕ ಜಯತೀರ್ಥ , ನಟ ಮತ್ತು ರಾಜಕೀಯ ನೇತಾರ ಡಾ. ಕಲ್ಮೇಶ್ ಹಾವೇರಿಪೇಠ ಇನ್ನಿತರ ನಟನಟಿಯರು ಉಪಸ್ಥಿತರಿದ್ದರು.