ಕೃಷಿ ಮತ್ತು ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಳ್ಯದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಹಣ ವಸೂಲು ಮಾಡುತ್ತಿರುವ ಘಟನೆ ವರದಿಯಾಗಿದ್ದು ಇಂತಹ ಮೋಸದ ಜಾಲಕ್ಕೆ ಮರುಳಾಗಿ ಯಾರೂ ಹಣ ಕೊಟ್ಟು ಮೋಸಹೋಗಬಾರದೆಂದು ಸುಳ್ಯ ತಹಶೀಲ್ದಾರ್ ಜನರನ್ನು ವಿನಂತಿಸಿಕೊಂಡಿದ್ದಾರೆ.
ಸರಕಾರಿ ಕೆಲಸ ಹಣ ಕೊಟ್ಟು ಪಡೆಯಲು ಸಾಧ್ಯವಿಲ್ಲ. ಕೆ.ಪಿ.ಎಸ್.ಸಿ. ನಡೆಸುವ ಪರೀಕ್ಷೆ ಯಲ್ಲಿ ಪಾಸಾದರೆ ಮಾತ್ರ ಸರಕಾರಿ ಕೆಲಸ ಸಿಗುತ್ತದೆ. ಆದ್ದರಿಂದ ಸರಕಾರಿ ಕೆಲಸ ತೆಗೆಸಿಕೊಡುವುದಾಗಿ ಯಾರಾದರೂ ಹೇಳಿದರೆ ನಂಬಬೇಡಿ. ಅವರಿಗೆ ಹಣ ಕೊಟ್ಟು ಮೋಸಹೋಗಬೇಡಿ ” ಎಂದು ತಹಶೀಲ್ದಾರ್ ಕು.ಅನಿತಾಲಕ್ಷ್ಮಿ ಸುದ್ದಿಗೆ ತಿಳಿಸಿದ್ದಾರೆ.
Home Uncategorized ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುವವರಿಗೆ ಬಲಿಯಾಗಬೇಡಿ, ಜಾಗ್ರತೆಗಾಗಿ ತಹಶೀಲ್ದಾರ್ ಸೂಚನೆ