ದೊಡ್ಡತೋಟ : ಮಾಸಾಸನ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡತೋಟ ವಲಯದ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಭಾಸ್ಕರ ಎಂಬವರಿಗೆ ಮಾಸಾಸನ ವಿತರಣೆ ಕಾರ್ಯಕ್ರಮ ನಡೆಯಿತು.

ವರ್ಷದ ಹಿಂದೆ ಅಪಘಾತಗೊಂಡು ಕಾಲು ಮುರಿತಗೊಳಪಟ್ಟು ಯಾವುದೇ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ಯೋಜನೆಯ ಮಾಸಾಸನ ಮಂಜೂರಾಗಿದ್ದು ಮಂಜೂರಾದ ಮೊತ್ತವನ್ನು ಇಂದು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನಗದು ಸಹಾಯಕರಾದ ವೇಣುಗೋಪಾಲ್, ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರಭಾಕರ್, ಪುರುಷೋತ್ತಮ ನಾರ್ಣಕಜೆ, ಕುಶಾಲಪ್ಪ ದಾಸನಕಜೆ ಹಾಗೂ ವಿ ಎಲ್ ಈ ಮಲ್ಲಿಕಾ, ಮೇಲ್ವಿಚಾರಕರಾದ ಸೀತಾರಾಮ್ ಉಪಸ್ಥಿತರಿದ್ದರು.