ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಬಗ್ಗೆ ಪೂರ್ವಭಾವಿ ಸಭೆ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ
ಬಗ್ಗೆ ಪೂರ್ವಭಾವಿ ಸಭೆಯು ಜ.07 ರಂದು ನಡೆಯಿತು.
ದೇವಸ್ಥಾನದ ಆಡಳಿತಾಧಿಕಾರಿ ಶ್ರೀಮತಿ ಸುಹಾನರವರು ಪ್ರಾಸ್ತಾವಿಕವಾಗಿ ಮಾತನಾಡಿ ದೇವಸ್ಥಾನದಲ್ಲಿ ಪ್ರತಿ ವರ್ಷವು ನಡೆಯುವ ಜಾತ್ರೋತ್ಸವವು ಈ ವರ್ಷವೂ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಯಶಸ್ವಿಯಾಗಿ ನಡೆಯುವ ಬಗ್ಗೆ ಮಾತನಾಡಿ ಎಲ್ಲರ ಸಹಕಾರ ಕೋರಿದರು.


ಪ್ರದೀಪ್ ಕುಮಾರ್ ರೈ ಪನ್ನೆ ಸ್ವಾಗತಿಸಿದರು.
ಉದಯ ಕುಮಾರ್ ಲೆಕ್ಕಪತ್ರ ಮಂಡಿಸಿದರು.
ವೇದಿಕೆಯಲ್ಲಿ
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಸುನಿಲ್ ರೈ ಪುಡ್ಕಜೆ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದು ಜಾತ್ರೋತ್ಸವದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಎ.ಕೆ.ಮಣಿಯಣಿ, ಜಗನ್ನಾಥ ಆಳ್ವ ಕಲ್ಲೋಣಿ, ಜಯರಾಮ ಉಮಿಕ್ಕಳ,
ಸತೀಶ್ ಕಿಲಂಗೋಡಿ,ನಾರಾಯಣ ಮಡಿವಾಳ ತಡಗಜೆ,ವಸಂತ ಉಲ್ಲಾಸ್,ಮಹಾಲಿಂಗ ಬೆಳ್ಳಾರೆ,ಶ್ರೀಮತಿ ಸ್ವಾತಿ ಕುರುಂಬುಡೇಲು,ಸುಬ್ಬಣ್ಣ ರೈ,ಗುಣವತಿ ಮಂಡೇಪು,ಶ್ರೀಮತಿ ಶಶಿಕಲಾ ಚಾವಡಿಬಾಗಿಲು, ದೇವಸ್ಥಾನದ ಸಿಬ್ಬಂದಿ ಮಹೇಶ ಕಲ್ಪಣೆ ಹಾಗೂ
ಭಕ್ತಾದಿಗಳು ಉಪಸ್ಥಿತರಿದ್ದರು.