ಬಾಳುಗೋಡಿನಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ

0

ಬಾಳುಗೋಡಿನ ಬಸವನಗುಡಿಯಲ್ಲಿ ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಇಂದು ಉದ್ಘಾಟನೆಗೊಂಡಿತು.
ಬೆಳಿಗ್ಗೆ ಗಣಹೋಮ, ಬಳಿಕ ಗೋ ಪೂಜೆ ನಡೆಯಿತು.

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ ಬಳ್ಳಂಜ ಹಾಲು ಸೊಸೈಟಿಯನ್ನು ಉದ್ಘಾಟಿಸಿದರು.
ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ ಕಟ್ಟೆಮನೆ ಅಧ್ಯಕ್ಷತೆ ವಹಿಸಿದ್ದರು. ಹಾಲು ಒಕ್ಕೂಟ ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಆರ್ಕಜೆ, ಶ್ರೀಮತಿ ಸವಿತಾ ಎನ್.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರ ಡಿ.ಅಶೋಕ, ಹರಿಹರಪಲ್ಲತ್ತಡ್ಕ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಕೊಲ್ಲಮೊಗ್ರ ಹರಿಹರ ಕೃಷಿಪತ್ತಿನ ಸಹಕಾರಿ ಸಂಘ, ಹರಿಹರಪಲ್ಲತ್ತಡ್ಕ ದ ಅಧ್ಯಕ್ಷ ಡಿ.ಎಸ್.ಹರ್ಷಕುಮಾರ್,ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ವ್ಯವಸ್ಥಾಾಪಕರು ಡಾ. ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕರು ಡಾ. ಡಿ.ಆರ್ ಸತೀಶ್ ರಾವ್, ವಿಸ್ತರಣಾಧಿಕಾರಿ ಹರೀಶ್‌ಕುಮಾರ್ ಎಂ.ಎಸ್, ಎನ್ ಆರ್ ಎಲ್ ಎಂ ಸುಳ್ಯ ವಲಯ ಮೇಲ್ವಿಚಾರಕ ಮಹೇಶ್, ಸುದೀಶ್ ಕಟ್ಟೆಮನೆ, ಹರಿಹರ ಪಲ್ಲತಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ, ಎನ್.ಆರ್.ಎಲ್.ಎಂ.ಸಂಜೀವಿ ಪ್ರೋಗ್ರಾಂ ಮ್ಯಾನೇಜರ್ ಶ್ರೀಮತಿ ಶ್ವೇತಾ, ಬೆಟ್ಟುಮಕ್ಕಿ ಶಿರಾಡಿ ದೈವಸ್ಥಾನ ಬಾಳುಗೋಡು ಅಧ್ಯಕ್ಷ ಜಯರಾಮ ಆಲ್ಕಬೆ, ಧರ್ಮಸ್ಥಳ ಗ್ರಾಾಮಾಭಿವೃದ್ಧಿ ಒಕ್ಕೂಟ ಬಾಳುಗೋಡು ಇದರ ಅಧ್ಯಕ್ಷ ನಾಗೇಶ, ಗುತ್ತಿಗಾರು ಪಶುವೈದ್ಯಾಧಿಕಾರಿ ವೆಂಕಟಾ ಚಲಪತಿ, ವೇದಿಕೆಯಲ್ಲಿದ್ದರು. ಸವಿತಾ ಪ್ರಾರ್ಥಸಿದರು. ಸಂಘದ ಕಾರ್ಯದರ್ಶಿ ವಾಣಿಶ್ರೀ ಕಟ್ಟೆಮನೆ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ ಕಿರಿಭಾಗ ಸ್ವಾಗತಿಸಿ, ವಸಂತ ಕಿರಿಭಾಗ ವಂದಿಸಿದರು. ಅಜೆಯ್ ಪೊಯ್ಯೆಮಜಲು ಕಾರ್ಯಕ್ರಮ ನಿರೂಪಿಸಿದರು.