ಭಾರತೀಯ ಲೆಕ್ಕ ಪರಿಶೋಧನ ಮಂಡಳಿಯ ಅಂತಿಮ ಪರೀಕ್ಷೆಯಲ್ಲಿ ಕೀರ್ತನ್ ಹೆಚ್ .ಜಿ. ತೇರ್ಗಡೆ

0

ನವೆಂಬರ್ ನಲ್ಲಿ ನಡೆದ ಭಾರತೀಯ ಲೆಕ್ಕ ಪರಿಶೋಧನ ಮಂಡಳಿಯ ಅಂತಿಮ ಪರೀಕ್ಷೆಯಲ್ಲಿ ಕೀರ್ತನ್ ಹೆಚ್ .ಜಿ. ಅವರು ತೇರ್ಗಡೆಯಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಡ್ಸ್ ನಲ್ಲಿ, ಪ್ರೌಢ ಶಿಕ್ಷಣವನ್ನು ಕೆ.ವಿ.ಜಿಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಎನ್.ಎಂ.ಸಿ ಯಲ್ಲಿ, ಪದವಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ, ಎಂಬಿಎ ಶಿಕ್ಷಣವನ್ನು ಮಂಗಳೂರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿಹಾಗೂ ಸಿಎ ತರಬೇತಿಯನ್ನು ದೆಹಲಿಯಲ್ಲಿ ಪಡೆದರು. ಇವರು ಸುಳ್ಯ ಬೀರಮಂಗಲದ ನಿವೃತ್ತ ಸಬ್​ ಇನ್ಸ್​​ಪೆಕ್ಟರ್ ಗಣಪತಿ ಹೆಚ್. ಎ. ಹಾಗೂ ಗೀತಾ ಹೆಚ್ .ಜಿ. ದಂಪತಿಯ ಪುತ್ರ.